ನನಗೆ ಇಂಡಸ್ಟ್ರಿಯಲ್ಲಿ ಮೊದಲು ಕರೆ ಮಾಡಿದ ಸ್ಟಾರ್ ನಟ ಪುನೀತ್: ವಸಿಷ್ಠ ಸಿಂಹ

Public TV
2 Min Read

ಬೆಂಗಳೂರು: ನಾನು ಅಭಿನಯಿಸಿದ್ದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ನಂತರ ನನಗೆ ಇಂಡಸ್ಟ್ರಿಯಲ್ಲಿ ಮೊದಲು ಕರೆ ಮಾಡಿದ ಸ್ಟಾರ್ ನಟ ಅಂದರೆ ಪುನೀತ್ ರಾಜ್‍ಕುಮಾರ್ ಅವರು ಎಂದು ನಟ ವಸಿಷ್ಠ ಸಿಂಹ ಹೇಳಿಕೊಂಡಿದ್ದಾರೆ.

ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ರಿಯೆ ಇಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನೆರವೇರಿತು. ಬಳಿಕ ಮಾಧ್ಯಮದವರೊಂದಿಗೆ ವಸಿಷ್ಠ ಸಿಂಹ ಅವರು, ಪುನೀತ್ ರಾಜ್‍ಕುಮಾರ್ ಅವರ ಸಾವು ಕನ್ನಡಿಗರೆಲ್ಲರ ಮನೆಯ ಶೋಕ. ಪ್ರತಿಯೊಬ್ಬರು ಬಹಳ ಪ್ರೀತಿಸುತ್ತಿದ್ದಂತಹ ವ್ಯಕ್ತಿ ಪವರ್ ಸ್ಟಾರ್. ಆದರೆ ಅವರು ಈ ರೀತಿ ಅಕಾಲಿಕ ಮರಣ ಹೊಂದುತ್ತಾರೆ ಎಂದು ಯಾರು ಕೂಡ ಭಾವಿಸಿರಲಿಲ್ಲ. ಇದು ಬಹಳ ದೊಡ್ಡ ನಷ್ಟವಾಗಿದೆ. ಅವರು ಸಾಯುವ ಹಿಂದಿನ ದಿನ ಅವರನ್ನು ಕೊನೆಯ ಬಾರಿ ನಾನು ಭೇಟಿಯಾಗಿದ್ದೆ. ಆಗ ಅವರ ಚೆನ್ನಾಗಿಯೇ ಇದ್ದರು ಮತ್ತು ಚೆನ್ನಾಗಿಯೇ ಮಾತನಾಡಿಸಿದರು. ಕ್ರೂರ ವಿಧಿ. ಇದು ಆಗಬಾರದಿತ್ತು ಆದರೆ ಆಗಿದೆ ಎಂದಿದ್ದಾರೆ. ಇದನ್ನೂ ಓದಿ: ಪುನೀತ್ ನಿಧನದ ಆಘಾತಕ್ಕೆ ಅಭಿಮಾನಿ ಸಾವು

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಹಿಟ್ ಆದ ವೇಳೆ ಸಿನಿಮಾ ನೋಡಿ ನನಗೆ ಇಂಡಸ್ಟ್ರಿಯಿಂದ ಕರೆ ಮಾಡಿದಂತಹ ಮೊದಲ ಸ್ಟಾರ್ ನಟ ಅಂದರೆ ಪುನೀತ್ ರಾಜ್‍ಕುಮಾರ್. ಅವರು ಕರೆ ಮಾಡಿ ನಾನು ಪುನೀತ್ ರಾಜ್‍ಕುಮಾರ್ ಮಾತನಾಡುತ್ತಿದ್ದೇನೆ ಎಂದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ನಾನು ಯಾರೋ ತಮಾಷೆಗೆ ಕಾಲೆಳೆಯಲು ಮಾಡಿದ್ದಾರೆ ಅಂದುಕೊಂಡಿದ್ದೆ. ಆದರೆ ಅವರ ಧ್ವನಿ ಎಂದು ಅರಿತುಕೊಳ್ಳುವುದಕ್ಕೆ ಬಹಳಷ್ಟು ಸಮಯ ತೆಗೆದುಕೊಂಡೆ. ನಂತರ ಅವರು ನನ್ನನ್ನು ಬಹಳ ಹೊಗಳಿ ಮಾತನಾಡಿದರು. ಇದರಲ್ಲಿಯೇ ಅವರು ಪಾತ್ರವನ್ನು ಎಷ್ಟು ಪ್ರೀತಿಸಿದ್ದಾರೆ ಎಂದು ಗೊತ್ತಾಗುತ್ತದೆ. ಇದನ್ನೂ ಓದಿ: ಅಪ್ಪಾಜಿ  ಕುಟುಂಬಸ್ಥರಿಗೆಲ್ಲಾ ಕೋಳಿ, ಕಜ್ಜಾಯ ಅಂದ್ರೆ ಬಹಳ ಪ್ರೀತಿ: ಕುಮಾರ್ ಬಂಗಾರಪ್ಪ

ಅವರ ಪ್ರೊಡಕ್ಷನ್‍ನಲ್ಲಿ ಕೂಡ ನಾನು ನಟಿಸಿದ್ದೇನೆ. ಹಲವಾರು ಯುವಕರಿಗೆ ನಿರ್ದೇಶಕರಿಗೆ, ನಟರಿಗೆ ಅವರ ಪ್ರೊಡಕ್ಷನ್‍ನಲ್ಲಿ ಸಿನಿಮಾ ಮಾಡಿದ್ದಾರೆ. ಎಲ್ಲ ರೀತಿಯಲ್ಲಿಯೂ ಬೆಂಬಲ ನೀಡುತ್ತಿದ್ದ ಒಂದು ದೊಡ್ಡ ಶಕ್ತಿ ಕೇಂದ್ರ ಎಂದೇ ಹೇಳಬಹುದಾದ ಪುನೀತ್ ರಾಜ್‍ಕುಮಾರ್ ಅವರ ಇಂದಿಲ್ಲ ಎಂಬುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಎಲ್ಲರಿಗೂ ಅವರು ಸ್ಫೂರ್ತಿಯಾಗಿದ್ದರು. ಯಾವತ್ತು ಚಿಕ್ಕವರು ದೊಡ್ಡವರು ಎಂಬ ಭೇದ-ಭಾವ ಇಲ್ಲದೇ ಒಂದೇ ಸಮನಾಗಿ ನೋಡುತ್ತಿದ್ದರು. ಒಂದೇ ರೀತಿ ಗೌರವಿಸುತ್ತಿದ್ದರು ಮತ್ತು ತುಂಬಾ ಪ್ರೀತಿಸುತ್ತಿದ್ದರು. ಇಂದು ಅವರನ್ನು ಕೇವಲ ದೈಹಿಕವಾಗಿ ಕಳೆದುಕೊಂಡಿದ್ದೇವೆ. ಆದರೆ ಅವರ ಮಾತು, ಸಿನಿಮಾ, ಕಾರ್ಯವೈಖರಿ ಎಲ್ಲ ನಮ್ಮೊಂದಿಗೆ ಇರುತ್ತದೆ.

Share This Article
Leave a Comment

Leave a Reply

Your email address will not be published. Required fields are marked *