ಕಡಿಮೆ ಅವಧಿಯಲ್ಲೇ ಪ್ರಜಾಕೀಯ ಗಮನ ಸೆಳೆದಿದೆ- ಉಪೇಂದ್ರ

Public TV
1 Min Read

ಬೆಂಗಳೂರು: ಕಡಿಮೆ ಅವಧಿಯಲ್ಲಿಯೇ ಪ್ರಜಾಕೀಯ ಪಕ್ಷ ಜನರ ಗಮನ ಸೆಳೆದಿದೆ. ಪಕ್ಷದ ಫಲಿತಾಂಶ ಖುಷಿ ತಂದಿದೆ ಎಂದು ನಟ ಉಪೇಂದ್ರ ಹೇಳಿದ್ದಾರೆ.

ನಗರದಲ್ಲಿ ಇಂದು ಬುದ್ಧಿವಂತ – 2 ಸಿನಿಮಾದ ಮುಹೂರ್ತ ಸಮಾರಂಭದ ವೇಳೆ ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ದೇಶದ ರಾಜಕಾರಣ ತೀವ್ರ ಕುತೂಹಲ ಕೆರಳಿಸಿತ್ತು. ನರೇಂದ್ರ ಮೋದಿ ಮತ್ತೆ ಗೆಲುವು ಸಾಧಿಸಿರೋದು ಖುಷಿ ತಂದಿದೆ. ಈ ಐದು ವರ್ಷದಲ್ಲಿ ಮೋದಿ ಮತ್ತಷ್ಟು ಸಾಧನೆ ಮಾಡುತ್ತಾರೆ ಎಂದು ನಾನೂ ಕಾಯುತ್ತಿದ್ದೇನೆ ಅಂದರು.

ಸ್ಮಾರ್ಟ್ ಸಿಟಿಯಂತಹ ಯೋಜನೆಗಳು ದೀರ್ಘ ಕಾಲದ್ದು, ಈ ಐದು ವರ್ಷದಲ್ಲಿ ಮೋದಿ ಮತ್ತಷ್ಟು ಸಾಧಿಸುತ್ತಾರೆ ಎಂಬ ಭರವಸೆಯಿದೆ. ಪ್ರಜಾಕೀಯದ ಫಲಿತಾಂಶವೂ ಖುಷಿ ತಂದಿದೆ. ಕಡಿಮೆ ಅವಧಿಯಲ್ಲೆ ನಮ್ಮ ಪಕ್ಷ ಜನರ ಗಮನ ಸೆಳೆದಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಮುಂದುವರಿದು ಉತ್ತಮ ಕೆಲಸಗಳನ್ನು ಮಾಡಲಿ. ಸರ್ಕಾರ ಉರುಳುವುದು ಮತ್ತೆ ಎಲೆಕ್ಷನ್ ಆಗೋದು ಚೆನ್ನಾಗಿರೋದಿಲ್ಲ, ಜನ ಕೂಡ ಪ್ರಿಪೇರ್ ಆಗಿರುವುದಿಲ್ಲ ಎಂದು ತಿಳಿಸಿದರು.

ಸುಮಲತಾಗೆ ಹಾರೈಕೆ:
ಇದೇ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ಗೆಲುವಿನ ಬಗ್ಗೆ ಮಾತನಾಡಿದ ಅವರು, ಸುಮಲತಾ ಅವರಿಗೆ ಧನ್ಯವಾದಗಳು. ಅವರು ಗೆದ್ದಿದ್ದೂ ಖುಷಿ ತಂದಿದೆ. ಅವರಲ್ಲಿ ಪ್ರಬುದ್ಧ ರಾಜಕಾರಣಿ ಆಗುವ ಎಲ್ಲಾ ಲಕ್ಷಣಗಳಿವೆ. ಅವರಿಗೆ ಮುಂದೆಯೂ ಒಳಿತಾಗಲಿ ಎಂದು ಉಪೇಂದ್ರ ಹಾರೈಸಿದರು.

Share This Article
Leave a Comment

Leave a Reply

Your email address will not be published. Required fields are marked *