BBK 11: ಭವ್ಯಾಗೆ ಐ ಲವ್‌ ಯೂ ಪನ್ನಿ ಕುಟ್ಟಿ ಎಂದ ತ್ರಿವಿಕ್ರಮ್‌

Public TV
2 Min Read

ಬಿಗ್‌ ಬಾಸ್‌ ಮನೆಯ ಆಟ (Bigg Boss Kannada 11) ಇನ್ನೇನು 4 ದಿನಗಳಲ್ಲಿ ಅಂತ್ಯವಾಗಲಿದೆ. ಹೀಗಿರುವಾಗಲೇ ಭವ್ಯಾಗೆ ಪತ್ರ ಬರೆದು ತಮ್ಮ ಮನದಾಳದ ಮಾತನ್ನು ತ್ರಿವಿಕ್ರಮ್ ಅವರು ಹೇಳಿಕೊಂಡಿದ್ದಾರೆ. ಸ್ಪರ್ಧಿಗಳ ಎದುರು ಭವ್ಯಾಗೆ (Bhavya Gowda) ಐ ಲವ್ ಯೂ ಎಂದು ತ್ರಿವಿಕ್ರಮ್ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.‌ ಇದನ್ನೂ ಓದಿ:ನಿವೃತ್ತಿ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ- ಶ್ರೀವಲ್ಲಿ ಅಭಿಮಾನಿಗಳು ಶಾಕ್

ಬಿಗ್ ಬಾಸ್‌ನಲ್ಲಿ ಚಟುವಟಿಕೆ ಒಂದನ್ನು ನೀಡಲಾಗಿತ್ತು. ಈ ಚಟುವಟಿಕೆ ಪ್ರಕಾರ, ಸ್ಪರ್ಧಿಗಳು ಎಲ್ಲಾ ಸ್ಪರ್ಧಿಗಳಿಗೆ ಪತ್ರ ಬರೆದು ತಮಗೆ ಅನಿಸಿದ ಮಾತನ್ನು ತಿಳಿಸಬೇಕಿತ್ತು. ಇದಕ್ಕಾಗಿ ರೆಸಾರ್ಟ್ ಮಾದರಿಯ ಸೆಟ್ ಕೂಡ ಹಾಕಿದ್ದರು ಬಿಗ್ ಬಾಸ್. ಅಲ್ಲಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ವೇಳೆ, ಭವ್ಯಾ ಅವರಿಗೆ ತ್ರಿವಿಕ್ರಮ್ ಪತ್ರ ಬರೆದಿದ್ದಾರೆ. ಭಾವನೆಗಳ ಮಹಾಪೂರ ನೀನು, ಕನಸುಗಳ ಶಿಖರ ನೀನು, ಸಾಧನೆಗಳ ಚೀಲವನ್ನು ನೀರು ಕುಡಿದಷ್ಟೇ ಸಲೀಸಾಗಿ ಹೊತ್ತು ಸಾಗುತ್ತಿರುವ ಸ್ಮಾಲ್ ಸಾಧಕಿ ನೀನು. ಕಷ್ಟ ಎಂಬ ಕೆಸರಿನಲ್ಲಿ ಅರಳಿದ ಕಮಲ ನೀನು. ತಂದೆ-ತಾಯಿಗೆ ಗಂಡು ಮಗ ನೀನು. ಗೆಳೆಯರಿಗೆ ರೌಡಿ ಬೇಬಿ ನೀನು. ಕನ್ನಡಿಗರ ಮನ ಗೆದ್ದ ಗೀತಾ ನೀನು. ಜಗತ್ತು ಬೇಕಾದ್ದು ಹೇಳಲಿ, ನನ್ನ ಮತ್ತು ನಿನ್ನ ಗೆಳೆತನ ಕಲುಷಿತವಾಗದಿರಲಿ. ಯಾರು ಏನಾದರೂ ಹೇಳಿಕೊಳ್ಳಲಿ. ಐ ಲವ್ ಯೂ ಪನ್ನಿ ಕುಟ್ಟಿ ಎಂದು ಭವ್ಯಾಗಾಗಿ  ತ್ರಿವಿಕ್ರಮ್ (Trivikram) ಪತ್ರದಲ್ಲಿ ಹೇಳಿದ್ದಾರೆ.

ಈ ವೇಳೆ, ಇದೆಲ್ಲ ವೋಟ್ ಪಡೆಯಲು ಮಾಡಿದ ತಂತ್ರ ಎಂದು ಹನುಮಂತಗೆ ಅನ್ನಿಸಿರಬಹುದು. ಇದಕ್ಕಾಗಿ ಅವರು, ಏನ್ ಆಡ್ತಾರಿ ಆಟಾನ ಎಂದರು. ಈ ಮಾತನ್ನು ಕೇಳಿ ಎಲ್ಲರೂ ನಕ್ಕರು.

ಇನ್ನೂ ಈ ಮೊದಲು ಭವ್ಯಾಗೆ ತ್ರಿವಿಕ್ರಮ್ ಅವರು ಪ್ರಪೋಸ್ ಕೂಡ ಮಾಡಿದ್ದರು. ಹೊರ ಹೋದ ಬಳಿಕ ಆ ಬಗ್ಗೆ ಯೋಚಿಸೋಣ ಎಂದು ಭವ್ಯಾ ಅವರು ನೇರವಾಗಿ ಹೇಳಿಕೊಂಡಿದ್ದರು. ಇದು ವೀಕೆಂಡ್‌ ಪಂಚಾಯಿತಿಯಲ್ಲಿ ಸುದೀಪ್‌ ಮುಂದೆ ಚರ್ಚೆ ಕೂಡ ಆಗಿತ್ತು. ಆದರೆ ಇಬ್ಬರೂ ಪ್ರೀತಿಸುತ್ತಿರೋದಾಗಿ ಒಪ್ಪಿಕೊಂಡಿಲ್ಲ. ನಾವಿಬ್ಬರೂ ಜಸ್ಟ್‌ ಫ್ರೆಂಡ್ಸ್‌ ಎಂದಷ್ಟೇ ಮಾತನಾಡಿದರು.

Share This Article