ಔಟಾದ ಕ್ಷಣಾರ್ಧದಲ್ಲೇ ಮನೆಗೆ ಹರೀಶ್ ಎಂಟ್ರಿ -ಸ್ಪರ್ಧಿಗಳಿಗೆ ಶಾಕ್ ಕೊಟ್ಟ ಕಿಚ್ಚ

Public TV
2 Min Read

ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ರ ಹತ್ತನೇ ವಾರ ಎಲಿಮಿನೇಟ್ ಆದ ಸ್ಪರ್ಧಿ ಹರೀಶ್ ರಾಜ್ ಕ್ಷಣಾರ್ಧದಲ್ಲಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಹತ್ತನೇ ವಾರ ಏಳು ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಕುರಿ ಪ್ರತಾಪ್, ಕಿಶನ್, ಚಂದನಾ, ದೀಪಿಕಾ ದಾಸ್, ಹರೀಶ್ ರಾಜ್, ಚಂದನ್ ಆಚಾರ್ ಮತ್ತು ಚೈತ್ರಾ ಕೋಟೂರು ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಶನಿವಾರದ ಕಾರ್ಯಕ್ರಮದಲ್ಲಿ ಪ್ರತಾಪ್, ದೀಪಿಕಾ, ಕಿಶನ್ ಮತ್ತು ಚಂದನಾ ಸೇಫ್ ಆಗಿದ್ದರು. ಇನ್ನೂ ಹರೀಶ್ ರಾಜ್, ಚಂದನ್ ಆಚಾರ್, ಚೈತ್ರಾ ಕೋಟೂರ್ ಉಳಿದುಕೊಂಡಿದ್ದರು.

ಭಾನುವಾರ ಕಾರ್ಯಕ್ರಮದಲ್ಲಿ ಸುದೀಪ್ ಅವರು, ಮೊದಲಿಗೆ ಚಂದನ್ ಆಚಾರ್ ಸೇಫ್ ಆಗಿದ್ದಾರೆ. ಆದರೆ ಹತ್ತನೇ ವಾರ, 71 ದಿನಗಳ ಬಿಗ್‍ಬಾಸ್ ಪ್ರಯಾಣವನ್ನು ಮುಗಿಸುತ್ತಿರುವ ಸ್ಪರ್ಧಿ ಹರೀಶ್ ರಾಜ್ ಎಂದು ಪ್ರಸ್ತಾಪಿಸಿದ್ದಾರೆ. ಆದರೆ ಹರೀಶ್ ರಾಜ್ ಎಲಿಮಿನೇಟ್ ಕೇಳಿ ಇತರೆ ಸ್ಪರ್ಧಿಗಳು ಅಚ್ಚರಿಯಾಗಿದ್ದಾರೆ. ಮನೆಯಿಂದ ಹೋಗುವಾಗ ಹರೀಶ್ ರಾಜ್ ಮಾತಾಡಿ, ಬಿಗ್‍ಬಾಸ್ ಜರ್ನಿಯನ್ನು ನಾನು ತುಂಬಾ ಎಂಜಾಯ್ ಮಾಡಿದ್ದೀನಿ. ಯಾರಿಗಾದರೂ ಬೇಸರವಾಗಿದ್ದರೆ ಕ್ಷಮಿಸಿ ಎಂದು ಮನೆಯಿಂದ ಹೊರಹೋಗುವ ಮುನ್ನಾ ಚಂದನಾರನ್ನು ನೇರವಾಗಿ ನಾಮಿನೇಟ್ ಮಾಡಿ ಹೋಗಿದ್ದಾರೆ.

ಇತ್ತ ವಾಸುಕಿ ವೈಭವ್, ಚಂದನಾ ಮತ್ತು ಕಿಶನ್, ಹರೀಶ್ ಎಲಿಮಿನೇಟ್ ಬಗ್ಗೆ ಮಾತನಾಡುತ್ತಿದ್ದರು. ಆಗ ಬಿಗ್‍ಬಾಸ್, ವಾಸುಕಿ ಅವರೇ ನಿಮಗೆ ಹಸಿವು ಆಗುತ್ತಿದಿಯೇ, ಚಪಾತಿ ಲಟ್ಟಿಸಲು ರೆಡಿಯೇ ಎಂದರು. ವಾಸುಕಿ ಹೌದು ಬಿಗ್‍ಬಾಸ್ ಎಂದಾಕ್ಷಣ ಸ್ಟೋರ್ ರೂಮಿನ ಗಂಟೆ ಬಾರಿಸಿತು. ಅಲ್ಲಿಗೆ ಹೋಗಿ ಬಾಗಿಲು ತೆರೆದು ಮಕಾಡೆ ಮಲಗಿದ್ದ ವ್ಯಕ್ತಿಯನ್ನು ನೋಡಿ ಚಂದನಾ, ವಾಸುಕಿ ಕಿರುಚಿಕೊಂಡಿದ್ದಾರೆ.

ಮನೆಯ ಸದಸ್ಯರೆಲ್ಲರೂ ಓಡಿ ಬಂದು ಹರೀಶ್ ರಾಜ್ ಅವರನ್ನು ತಮಾಷೆ ಸಾಕು ಎದ್ದೇಳಿ ಎಂದು ಎಬ್ಬಿಸಿದ್ದಾರೆ. ನಗುನಗುತ್ತಾ ಎದ್ದ ಹರೀಶ್ ರಾಜ್ ಮತ್ತು ಎಲ್ಲರೂ ಬಂದು ಎಂದಿನಂತೆ ಸೋಫಾದಲ್ಲಿ ಕುಳಿತರು. ಮತ್ತೆ ಸುದೀಪ್ ಟಿವಿ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. ಆಗ ಹರೀಶ್ ರಾಜ್ ಮತ್ತು ವಾಸುಕಿ ನೀವಿಬ್ಬರೂ ಒಮ್ಮೆ, ಬಿಗ್‍ಬಾಸ್ ಮನೆಯಿಂದ ಓಡಿ ಹೋದರೆ ಹೇಗೆ ಎಂದು ಮಾತಾಡಿಕೊಂಡಿದ್ದೀರಿ. ಆಗ ವಾಸುಕಿ, ಇನ್ನೇನು ಮಾಡುತ್ತಾರೆ, ಮತ್ತೆ ಸ್ಟೋರ್ ರೂಮಿಗೆ ತಂದು ಬಿಡುತ್ತಾರೆ ಎಂದಿದ್ದರು. ನಾವೂ ಯಾಕೆ ಆ ರೀತಿ ಮಾಡಬಾರದು ಅಂತ ಈ ಸಣ್ಣ ಝಲಕ್ ಕೊಟ್ಟೆವು ಎಂದರು. ನಂತರ ಈ ವಾರ ನೋ ಎಲಿಮಿನೇಷನ್ ಎಂದು ಹೇಳಿ ಮನೆಯ ಸದಸ್ಯರಿಗೆ ಶಾಕ್ ನೀಡಿದರು.

 

Share This Article
Leave a Comment

Leave a Reply

Your email address will not be published. Required fields are marked *