ಕಾವೇರಿ ನೀರಿನ ಕುರಿತು ಮನ ಮಿಡಿಯುವ ಮಾತನ್ನಾಡಿದ ಸಿಂಬು

Public TV
1 Min Read

ಚೆನ್ನೈ: ತಮಿಳುನಾಡು ಸರ್ಕಾರ ಕಾವೇರಿ ನದಿ ನಿರ್ವಹಣಾ ಮಂಡಲಿ ರಚನೆ ಕುರಿತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಹಲವು ತಮಿಳು ಸಿನಿಮಾ ನಟರು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಆದರೆ ತಮಿಳು ನಟ ಸಿಂಬು ಇತರರಿಗೆ ಭಿನ್ನವಾಗಿ ಶಾಂತಿ ಹಾಗೂ ಪ್ರೀತಿಯಿಂದ ನೀರನ್ನು ಪಡೆಯೋಣ ಎಂದಿದ್ದಾರೆ.

ಸದ್ಯ ಕಾವೇರಿ ವಿವಾದ ಕುರಿತು ಸಿಂಬು ಮಾಡಿರುವ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಭಾಷಣದಲ್ಲಿ ಕಾವೇರಿಗಾಗಿ ರಾಜಕೀಯ ಬಿಟ್ಟು ಮಾನವೀಯತೆ ದೃಷ್ಟಿಯಿಂದ ಬಗೆಹರಿಸೋಣ, ನಾವೆಲ್ಲಾ ಕರ್ನಾಟಕದ ತಾಯಂದಿರು, ಅಣ್ಣಂದಿರನ್ನ ಪ್ರಾರ್ಥಿಸೋಣ. ಯಾರ ಮಾತೋ ಕೇಳಿ ನೀವು ಕೆಣಕುವ ಮಾತುಗಳನ್ನಾಡಿದಲ್ಲಿ ಕರ್ನಾಟಕದವರು ನೀರೇ ಕೊಡಲ್ಲ ಎಂದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಈ ರೀತಿಯ ಹೋರಾಟದ ಬದಲು ಕರ್ನಾಟಕದಲ್ಲಿರುವ ನಮ್ಮ ಮಾತೆಯರನ್ನು ಕೇಳೋಣ. ನಿಮ್ಮ ಮಕ್ಕಳಿಗೆ ಕುಡಿಸಿ ಉಳಿದ ನೀರನ್ನ ನಮಗೆ ಕೊಡಿ ಎಂದು ಮನವಿ ಮಾಡೋಣ. ಅದರು ಅವರ ಮನಸ್ಸು ಕರಗಿಲ್ಲ ಎಂದರೆ ನಮ್ಮ ಕಣ್ಣೀರಿಗೆ ಅವರ ಮನಸು ಕರಗುತ್ತದೆ. ಈ ರೀತಿಯ ಹೋರಾಟ ಬೇಡ. ಶಾಂತ ರೀತಿಯಲ್ಲಿ ಅವರನ್ನು ಕೇಳೋಣ ಎಂದು ಮನವಿ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *