ಶಿವಣ್ಣನ `ದ್ರೋಣ’ ಜೂ.22 ರಿಂದ ಪ್ರಾರಂಭ

Public TV
1 Min Read

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ದ್ರೋಣ ಚಿತ್ರದ ಮುಹೂರ್ತ ಜೂನ್ 22ರಂದು ನಡೆಯಲಿದೆ. ಈಗಾಗಲೇ ಶಿವಣ್ಣ ರುಸ್ತುಂ, ಕವಚ, ದಿ ವಿಲನ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ನಟ, ನಿರ್ದೇಶಕ ಪ್ರಮೋದ್ ಚಕ್ರವರ್ತಿ ಈ ಸಿನೆಮಾ ನಿರ್ದೇಶನ ಮಾಡಲಿದ್ದಾರೆ. ಜೂನ್ 22ಕ್ಕೆ ಚಿತ್ರದ ಮುಹೂರ್ತ ನಡೆದು, ಆಗಸ್ಟ್ ತಿಂಗಳಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ದ್ರೋಣ ಸಿನೆಮಾದಲ್ಲಿ ಶಿವರಾಜ್ ಕುಮಾರ್ ಶಾಲಾ ಶಿಕ್ಷಕನ ಪಾತ್ರ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಚಿತ್ರದಲ್ಲಿ ಇನಿಯಾ, ಸ್ವಾತಿ ಶರ್ಮ, ರಂಗಾಯಣ ರಘು, ವಿ ಮನೋಹರ್, ಸಾಧುಕೋಕಿಲ, ಬಾಬು ಹಿರಣ್ಣಯ್ಯ, ಶಂಕರ್ ರಾವ್, ವಿಜಯಕಿರಣ್, ರೇಖಾದಾಸ್, ಪ್ರಕಾಶ್ ಹೆಗ್ಗೋಡು, ಆನಂದ್ ಮುಂತಾದವರು ಅಭಿನಯಿಸುತ್ತಿದ್ದಾರೆ.

ಡಾಲ್ಫಿನ್ ಮೀಡಿಯಾ ಹೌಸ್ ಲಾಂಛನದಲ್ಲಿ ಮಹದೇವ್.ಬಿ. ಸಂಗಮೇಶ.ಬಿ., ಶೇಶು ಚಕ್ರವರ್ತಿ ಜೊತೆಯಾಗಿ ‘ದ್ರೋಣ’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ- ಪ್ರಮೋದ್ ಚಕ್ರವರ್ತಿ, ಛಾಯಾಗ್ರಹಣ – ಜೆ.ಎಸ್.ವಾಲಿ, ಸಂಗೀತ – ರಾಮ್‍ಕ್ರಿಶ್, ಸಂಕಲನ – ಬಸವರಾಜ ಅರಸ್, ಕಲೆ – ಮೋಹನ್ ಪಂಡಿತ್, ಸಹ ನಿರ್ದೇಶನ – ಭವಾನಿ ಶಂಕರ್, ಸಾಹಸ – ಡಿಫರೆಂಟ್ ಡ್ಯಾನಿ, ವಿಜಿ, ಸಾಹಿತ್ಯ-ವಿ ಮನೋಹರ್, ಡಾ. ನಾಗೇಂದ್ರ ಪ್ರಸಾದ್, ನಿರ್ವಹಣೆ – ವಜ್ರೇಶ್ವರಿ ಮಲ್ಲಿಕಾರ್ಜುನ ವಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *