ನಾನು ಮುಸ್ಲಿಂ, ನನ್ನ ಹೆಂಡತಿ ಹಿಂದೂ.. ನನಗೆ ಅಭದ್ರತೆ ಕಾಡುತ್ತಿಲ್ಲ ಎಂದ ನಟ ನಾಸಿರುದ್ಧೀನ್ ಶಾ

Public TV
1 Min Read

ಹಿಂದೂ-ಮುಸ್ಲಿಂ ವಿಚಾರದಲ್ಲಿ ದ್ವೇಷ ಹರಡುವ ಕೆಲಸ ಭಾರತದಲ್ಲಿ ಆಗುತ್ತಿದೆ. ಎರಡೂ ಕಡೆಯಲ್ಲೂ ದ್ವೇಷ ಹಂಚಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯೆ ಪ್ರವೇಶಿಸಿ, ಇದನ್ನು ತಿಳಿಗೊಳಿಸಬೇಕು. ನಿಯಂತ್ರಿಸಬೇಕು. ಇಲ್ಲದೇ ಹೋದರೆ, ದೊಡ್ಡಮಟ್ಟದಲ್ಲಿಯೇ ಅಪಾಯ ಕಾದಿರುತ್ತದೆ ಎಂದಿದ್ದಾರೆ ಬಾಲಿವುಡ್ ಖ್ಯಾತ ನಟ ನಾಸಿರುದ್ಧೀನ್ ಶಾ. ಕೋಮು ಗಲಭೆಯ ವಿಚಾರದಲ್ಲಿ ಶಾ ತುಂಬಾ ನೊಂದುಕೊಂಡು ಮಾತನಾಡಿದ್ದಾರೆ. ಇದನ್ನೂ ಓದಿ: ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

ದ್ವೇಷ ಹರಡುವವರ ಬಗ್ಗೆ ನಾನೆಷ್ಟೇ ತೀಕ್ಷ್ಣವಾಗಿ ಮಾತನಾಡಿದರೂ, ಅದು ಶಾರೂಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಅವರಷ್ಟು ಶಕ್ತಿಯುತವಾಗಿ ಇರುವುದಿಲ್ಲ. ಈ ಮೂವರು ನನಗಿಂತ ಎತ್ತರದಲ್ಲಿ ಇದ್ದಾರೆ. ಇವರು ಮಾತನಾಡಿದರೆ, ಅಲ್ಲೊಂದು ಸೌಹಾರ್ದ ನೆಲೆ ಕಾಣಬಹುದು. ಆದರೆ, ಅದು ಅಷ್ಟು ಸುಲಭವಾದದ್ದಲ್ಲ ಎನ್ನುವುದು ನನಗೂ ಅರಿವಿದೆ. ಈ ಕುರಿತು ಮಾತನಾಡಿದರೆ, ದೊಡ್ಡಮಟ್ಟದ ರಿಸ್ಕ್ ತಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ ಶಾ. ಇದನ್ನೂ ಓದಿ : ಬದಲಾಯಿತು ‘ಗೋಧ್ರಾ’ ಟೈಟಲ್ : ಡಿಯರ್ ವಿಕ್ರಂ ಆದ ನೀನಾಸಂ ಸತೀಶ್

ಶಾಂತಿ ಭಾರತವನ್ನು ನಾವು ಬಯಸಬೇಕು. ಏನಾದರೂ ಈ ಕುರಿತು ಮಾತನಾಡಿದರೆ, ನಾವೇ ಟಾರ್ಗೆಟ್ ಆಗುತ್ತೇವೆ. ಸೋನು ಸೂದ್ ಸೇರಿದಂತೆ ಹಲವರು ಗುರಿಯಾಗಿ, ಮನೆಗೆ ಐಟಿ ರೇಟ್ ಕೂಡ ಮಾಡಿಸಿಕೊಂಡಿದ್ದಾರೆ. ನಾವು ಇಂತಹ ಸ್ಥಿತಿಯಲ್ಲಿ ಇದ್ದೇವೆ. ಮಾತನಾಡುವ ಹಕ್ಕುಗಳನ್ನೇ ಕಸಿದುಕೊಳ್ಳಲಾಗುತ್ತಿದೆ ಎಂದು ಸಂದರ್ಶನವೊಂದರಲ್ಲಿ ಮಾರ್ಮಿಕವಾಗಿ ಶಾ ನುಡಿದಿದ್ದಾರೆ.

ನಾನೊಬ್ಬ ಮುಸ್ಲಿಂ, ನನ್ನ ಹೆಂಡತಿ ಹಿಂದೂ. ನನಗೆ ಈ ಬಗ್ಗೆ ಅರಿವಿದೆ. ಹಾಗಾಗಿ ನನಗೆ ಈ ದೇಶದಲ್ಲಿ ಅಭದ್ರತೆ ಕಾಡುತ್ತಿಲ್ಲ. ತುಂಬಾ ಚೆನ್ನಾಗಿಯೇ ನಾನು ಬದುಕುತ್ತಿದ್ದೇನೆ. ಈ ಬದುಕು ಎಲ್ಲರದ್ದೂ ಆಗಬೇಕು ಎನ್ನುವುದು ನನ್ನ ಮಾತಿನ ಹಿಂದಿರುವ ಉದ್ದೇಶ ಎಂದಿದ್ದಾರೆ ನಾಸಿರುದ್ಧೀನ್.

Share This Article
Leave a Comment

Leave a Reply

Your email address will not be published. Required fields are marked *