ತೆಲಂಗಾಣದ ನಲ್ಗೊಂಡ ಬಳಿ ಅಪಘಾತ – ಜ್ಯೂನಿಯರ್ NTR ತಂದೆ ನಂದಮೂರಿ ಹರಿಕೃಷ್ಣ ದುರ್ಮರಣ

Public TV
1 Min Read

ಹೈದರಾಬಾದ್: ತೆಲಂಗಾಣದ ನಲ್ಗೊಂಡ ಬಳಿ ಬೀಕರ ಅಪಘಾತ ಸಂಭವಿಸಿದ್ದು, ಜ್ಯೂನಿಯರ್ ಎನ್ ಟಿಆರ್ ಅವರ ತಂದೆ ನಂದಮೂರಿ ಹರಿಕೃಷ್ಣ(61) ಮೃತಪಟ್ಟಿದ್ದಾರೆ.

ನಂದಮೂರಿ ಹರಿಕೃಷ್ಣ ಪರಿಚಯರಸ್ಥರ ಮದುವೆಗೆಂದು ನೆಲ್ಲೂರು ಜಿಲ್ಲೆಯ ಕಾವಲಿಗೆ ಹೋಗಿದ್ದರು. ಮದುವೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿ ಹೊಡೆದಿದೆ.

ಕಾರ್ ಪಲ್ಟಿ ಹೊಡೆದ ಪರಿಣಾಮ ಹರಿಕೃಷ್ಣ ಅವರ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹರಿಕೃಷ್ಣ ಪುತ್ರ ಜ್ಯೂನಿಯರ್ ಎನ್ ಟಿಆರ್ ಮತ್ತು ಕಲ್ಯಾಣ ಕುಮಾರ್ ಆಸ್ಪತ್ರೆಗೆ ಧಾವಿಸಿದ್ದಾರೆ. ಹರಿಕೃಷ್ಣ ಅವರು ಪ್ರಸ್ತುತ ಈಗಿನ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಾಮೈದ ಆಗಿದ್ದಾರೆ. ಆದ್ದರಿಂದ ಚಂದ್ರಬಾಬು ನಾಯ್ಡು ಈ ದಿನದ ಎಲ್ಲ ಕಾರ್ಯಕ್ರಮವನ್ನು ರದ್ದು ಮಾಡಿ ಹೈದರಾಬಾದ್ ನತ್ತ ಧಾವಿಸಿದ್ದಾರೆ.

ನಂದಮೂರಿ ಹರಿಕೃಷ್ಣ ಅವರು ಎನ್‍ಟಿ ರಾಮ್ ರಾವ್ ಅವರ ಹಿರಿಯ ಪುತ್ರನಾಗಿದ್ದು, ತೆಲುಗಿನ ಸೀತಯ್ಯ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ನಿರ್ಮಾಪಕರೂ ಕೂಡ ಆಗಿದ್ದು, ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *