ಚೆನ್ನೈ: ಕನ್ನಡದ ಕೆಂಪೇಗೌಡ-2 ಸಿನಿಮಾದ ಚಿತ್ರೀಕರಣ ವೇಳೆ ಅವಘಡ ಸಂಭವಿಸಿದೆ. ನಟರಾದ ಲೂಸ್ ಮಾದ ಯೋಗಿ ಮತ್ತು ಕೋಮಲ್ ಗಾಯಗೊಂಡಿದ್ದು, ಅದೃಷ್ಟವಶಾತ್ ಇಬ್ಬರೂ ನಟರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಮಿಳುನಾಡಿನ ಮಹಾಬಲಿಪುರಂ ಬಳಿ ಕೆಂಪೇಗೌಡ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿತ್ತು. ಸಾಹಸ ದೃಶ್ಯದ ಚಿತ್ರೀಕರಣಕ್ಕಾಗಿ ಅಲ್ಬೇರಿಯನ್ ಬೈಕ್ ಬಳಸಿಕೊಳ್ಳಲಾಗಿತ್ತು. ಈ ವೇಳೆ ಕೆಳಮಟ್ಟದಿಂದ ಬೈಕ್ ವೀಲಿಂಗ್ ಮಾಡುವಾಗ ವಾಹನ ಉಲ್ಟಾ ಬಿದ್ದಿದೆ. ಪರಿಣಾಮ ಯೋಗಿ ಹಾಗೂ ಕೋಮಲ್ಗೆ ಗಾಯವಾಗಿದೆ.
ಕೆಂಪೇಗೌಡ ಸಿನಿಮಾದಲ್ಲಿ ಕೋಮಲ್ ಮತ್ತು ಯೋಗಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಸ್ಥಳದಲ್ಲಿ ನಿರ್ಮಾಪಕ ಶಂಕರೇಗೌಡ ಹಾಜರಿದ್ದು, ಗಾಯಗೊಂಡಿರುವ ಕೋಮಲ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.