ಭಾರತೀಯ ಜನತಾ ಪಕ್ಷದ ಬ್ರೈನ್: ನಟ ಜಗ್ಗೇಶ್

Public TV
2 Min Read

ಬೆಂಗಳೂರು: ನಟ ಜಗ್ಗಶ್ ಕೇಂದ್ರ ಸಚಿವ ಅನಂತಕುಮಾರ್ ಅಂತಿಮ ದರ್ಶನ ಪಡೆದು ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಅನಂತಕುಮಾರ್ ಅವರ ಅಂತಿಮ ದರ್ಶನ್ ಪಡೆದ ಮಾಧ್ಯಮಗಳ ಜೊತೆ ಮಾತನಾಡಿದ ನಟ ಜಗ್ಗೇಶ್, ಅನಂತಕುಮಾರ್ ಅವರು ನಾನು ಕಂಡಂತಹ ಅದ್ಭುತ, ಸಜ್ಜನ ಮತ್ತು ಸರಳ ರಾಜಕಾರಣಿಗಳು. ಭಾರತೀಯ ಜನತಾ ಪಕ್ಷದ ಬ್ರೈನ್ ಎಂದರೆ ತಪ್ಪಾಗಲಾದರು. ನಾವು ಐದು ತಿಂಗಳ ಹಿಂದೆ ವೇದಿಕೆಯ ಮೇಲೆ ಅವರು ಪ್ರಧಾನಿ ಮೋದಿ ಅವರ ಭಾಷಣವನ್ನು ತರ್ಜುಮೆ ಮಾಡಿ ಮಾತನಾಡುತ್ತಿದ್ದನ್ನು ನೆನಪು ಮಾಡಿಕೊಂಡರೆ ಬಹಳ ಮನಸ್ಸಿಗೆ ಬೇಸರವಾಗುತ್ತದೆ.

ಐದು ತಿಂಗಳಲ್ಲಿ ನಾವು ಅವರನ್ನು ಕಳೆದುಕೊಳ್ಳುತ್ತೇವೆ ಎಂಬ ಸೂಚನೆ ಕೂಡ ಇರಲಿಲ್ಲ. ಮನಸ್ಸಿಗೆ ಬಹಳ ಬೇಸರವಾಗುತ್ತದೆ. ರಾಜ್ಯದ ಲಕ್ಷಾಂತರ ಕಾರ್ಯಕರ್ತರಿಗೆ ಇವತ್ತು ಬೇಸರದ ದಿನವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಬಲ್ಲೆ ಎಂದು ಜಗ್ಗೇಶ್ ಹೇಳಿದ್ದಾರೆ.

“ಅಂದು ನನ್ನ ಜೊತೆ ವೇದಿಕೆಯಲ್ಲಿ ಅನಂತ ಜೀ..ಮೋದಿರವರಿಗೆ ನನ್ನ ಪರಿಚಯಿಸಿದ ಕ್ಷಣವಾಗಿದೆ. ಸಿಕ್ಕಾಗೆಲ್ಲ “ಬೇವುಬೆಲ್ಲ” ಚಿತ್ರದ “ಜನುಮಾ ನೀಡುತ್ತಾಳೆ” ಹಾಡುತ್ತಿದ್ದರು ಅಪಾರ ಕನ್ನಡ ಪ್ರೇಮಿಯಾಗಿದ್ದರು. 5 ತಿಂಗಳ ಹಿಂದೆ ಇಷ್ಟು ಆರೋಗ್ಯದ ಮನುಷ್ಯ ಕಾಲವಾದರು ಎಂದರೆ ಬದುಕಿನ ಮೇಲೆ ನಂಬಿಕೆಯೇ ಹೋಗಿದೆ” ಎಂದು ಪ್ರಧಾನಿ ಮೋದಿ, ಅನಂತಕುಮಾರ್ ಜೊತೆ ಇದ್ದ ತಮ್ಮ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು ಕೇಂದ್ರ ಸಚಿವ ಅನಂತಕುಮಾರ್ ಅವರ ಸಾವಿನ ಬಗ್ಗೆ ದುಃಖಿತರಾಗಿ ಟ್ವೀಟ್ ಮಾಡಿದ್ದರು. ಪ್ರಧಾನಿ ಮೋದಿ ಮಾಡಿದ ಟ್ವೀಟ್‍ಗೆ “ನಾನು ಕಂಡ ಅದ್ಭುತ ವ್ಯೆಕ್ತಿತ್ವ ವಾಗ್ಮಿ ಸರಳ ಸಜ್ಜನ ನಾಯಕ ಶ್ರೀ ಅನಂತಕುಮಾರ್ ರವರು ಕಾಲನತೆಕ್ಕೆಗೆ ಇಷ್ಟು ಬೇಗ ಆಲಂಗಿಸಿದರು ಎಂದರೆ ನಂಬಲಾಗಲಿಲ್ಲಾ. ಅವರ ಆತ್ಮಕ್ಕೆ ಶಾಂತಿ ಕೋರುವೆ” ಎಂದು ರೀಟ್ವೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

https://www.youtube.com/watch?v=3EDQHOGaME4

Share This Article
Leave a Comment

Leave a Reply

Your email address will not be published. Required fields are marked *