ಕಾಂಗ್ರೆಸ್‍ಗೆ ನಟ ಜಗ್ಗೇಶ್ ಸವಾಲು

Public TV
1 Min Read

ಶಿವಮೊಗ್ಗ: ಕಾಂಗ್ರೆಸ್ ನಾಯಕರಿಗೆ ನಟ, ಬಿಜೆಪಿ ನಾಯಕ ಜಗ್ಗೇಶ್ ಸವಾಲೆಸೆದಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಹಾಗೂ ತೀರ್ಥಹಳ್ಳಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಜಗ್ಗೇಶ್ ಬುಧವಾರ ಸಂಜೆ ಭದ್ರಾವತಿಯಲ್ಲಿ ಬಹಿರಂಗ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಜೆಡಿಎಸ್‍ನಿಂದ ಕರೆದುಕೊಂಡು ಬಂದು ಕಾಂಗ್ರೆಸ್ ನವರು ಯಾಕೆ ನಮ್ಮ ನಾಯಕರು ಅಂದ್ರು ಎಂದು ಉತ್ತರ ಕೊಟ್ಟರೆ, ನಾನು ಯಾಕೆ ಕಾಂಗ್ರೆಸ್ ಬಿಟ್ಟೆ ಎಂದು ಉತ್ತರ ಕೊಡ್ತೀನಿ ಎಂದು ಜಗ್ಗೇಶ್ ಚಾಲೆಂಜ್ ಹಾಕಿದ್ದಾರೆ.

ಇದೇ ವೇಳೆ ಸಿನಿಮೀಯ ಶೈಲಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯದಲ್ಲಿನ ಮೈತ್ರಿ ಬಗ್ಗೆ ಟೀಕೆ ಮಾಡಿದ್ರು. ಯಾವ ಘಟಬಂಧನೂ ಇಲ್ಲ. ಮೋದಿನ ಮನೆಗೂ ಕಳಿಸೋಕೆ ಆಗೋಲ್ಲ. ಇವತ್ತು ರಾಜ್ಯದಲ್ಲಿ ಎರಡೆರಡು ಪಕ್ಷ ಸೇರಿಕೊಂಡು ಏನೋ ಮಾಡ್ತಿವಿ ಅಂತಿದ್ದಾರೆ. ಏನೂ ಮಾಡಕ್ಕೆ ಆಗಲ್ಲ ಎಂದು ವಾಗ್ದಾಳಿ ನಡೆಸಿದ್ರು.

ರಾಹುಲ್ ಗಾಂಧಿಗೆ ಎಬಿಸಿಡಿ ಗೊತ್ತಿಲ್ಲ. ವೇದಿಕೆ ಮೇಲೆ ಹೆಂಗೆ ಮಾತಾಡಬೇಕು ಎಂದು ಮೊದಲು ಟ್ರೈನಿಂಗ್ ಕೊಟ್ಟು ಕರ್ಕಂಡ್ ಬರ್ರಪ್ಪ ಎಂದು ಸಲಹೆ ನೀಡಿದರು. ಯಾಕೆ ಎಸ್ ಎಂ ಕೃಷ್ಣ ಬಿಜೆಪಿಗೆ ಬಂದ್ರೂ ಎಂದು ಕಾಂಗ್ರೆಸ್ ನವರು ಉತ್ತರ ಕೊಡಿ ಎಂದು ಹೇಳಿದರು.


ಶಿವಮೊಗ್ಗ ಲೋಕಸಭಾ ಕಣದಲ್ಲಿ ಸಿನಿಮಾ ಮಂದಿಯ ಪ್ರಚಾರ ಆರಂಭವಾಗಿದೆ. ಕಳೆದ ನಾಲ್ಕು ದಿನಗಳಿಂದ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಬೆನ್ನಲ್ಲೇ ಬುಧವಾರ ಜಗ್ಗೇಶ್ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಎಸ್ ಮಧು ಬಂಗಾರಪ್ಪ ಹಾಗೂ ಬಿಜೆಪಿಯಿಂದ ಬಿ.ವೈ ರಾಘವೇಂದ್ರ ಚುನಾವಣಾ ಕಣದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *