ಮಾಸ್ತಿಗುಡಿ: ಉದಯ್ ಪಾತ್ರಕ್ಕೆ ಖಳನಟ ಮಧು ಗುರುಸ್ವಾಮಿ ಧ್ವನಿ

Public TV
1 Min Read

ಬೆಂಗಳೂರು: ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ದುರಂತ ಸಾವು ಕಂಡ ನಟ ಉದಯ್ ಪಾತ್ರಕ್ಕೆ ಖಳನಟ ಮಧು ಗುರುಸ್ವಾಮಿ ಡಬ್ಬಿಂಗ್ ಮಾಡ್ತಿದ್ದಾರೆ.

ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಡಬ್ಬಿಂಗ್ ನಡೆಯುತ್ತಿದೆ. ಭಜರಂಗಿ ಚಿತ್ರದಲ್ಲಿ ಮಂತ್ರವಾದಿ, ವಜ್ರಕಾಯ ಸಿನಿಮಾದಲ್ಲಿ ಹುಜುರ್,
ಜೈ ಮಾರುತಿ 800 ಚಿತ್ರದಲ್ಲಿ ವೀರಪ್ಪನಾಗಿ ನಟಿಸಿದ್ದ ಮಧು ಗುರುಸ್ವಾಮಿ ನಟ ಉದಯ್ ಪಾತ್ರಕೆ ಧ್ವನಿಯಾಗಿದ್ದಾರೆ. ಅನಿಲ್ ಪಾತ್ರಕ್ಕೆ ನಟ ವಸಿಷ್ಠ ಅವರು ಈಗಾಗಲೇ ಡಬ್ಬಿಂಗ್ ಮಾಡಿದ್ದಾರೆ. ನಿರ್ದೇಶಕ ನಾಗಶೇಖರ್ ಡಬ್ಬಿಂಗ್ ಕೆಲಸಕ್ಕೆ ಸಾಥ್ ನೀಡಿದ್ದಾರೆ

ಫೆಬ್ರವರಿ 24ರಂದು ಮಾಸ್ತಗುಡಿ ಚಿತ್ರದ ಆಡಿಯೋ ಲಾಂಚ್ ಗೆ ಚಿತ್ರ ತಂಡ ಪ್ಲಾನ್ ಮಾಡಿದೆ. ಏಪ್ರಿಲ್ 14 ಕ್ಕೆ ಸಿನಿಮಾ ರಿಲೀಸ್‍ಗೆ ಸಿದ್ಧತೆ ನಡೆಸಿದೆ.

Share This Article
Leave a Comment

Leave a Reply

Your email address will not be published. Required fields are marked *