ಮಾರ್ಚ್ ನಿಂದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮೊಬೈಲ್ ಆಫ್

Public TV
1 Min Read

ಕಾಂತಾರ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ರಿಷಬ್ ಶೆಟ್ಟಿ, ಆ ಗೆಲುವನ್ನು ಪಕ್ಕಕ್ಕಿಟ್ಟು ಮುಂದಿನ ಕಥೆಯಲ್ಲಿ ತೊಡಗಿಕೊಳ್ಳಲಿದ್ದಾರಂತೆ. ಕಾಂತಾರ ಸಿನಿಮಾದ ಮುಂದಿನ ಭಾಗ ಯಾವಾಗ ಬರುತ್ತದೆ ಎನ್ನುವುದು ಸಹಜ ಪ್ರಶ್ನೆಯಾಗಿದೆಯಂತೆ. ಅಲ್ಲದೇ, ಅವರ ಮೇಲೆ ಅತೀ ನಿರೀಕ್ಷೆ ಇಟ್ಟಿರುವ ಕಾರಣದಿಂದಾಗಿ ಹೆಚ್ಚು ಕೆಲಸ ಮಾಡಬೇಕಿದೆಯಂತೆ. ಹಾಗಾಗಿ ಮಾರ್ಚ್ ನಿಂದ ಮೊಬೈಲ್ ಆಫ್ ಮಾಡಿಕೊಂಡು, ಕಥೆ ಬರೆಯುವುದರಲ್ಲಿ ಬ್ಯುಸಿಯಾಗುವೆ ಅಂದಿದ್ದಾರೆ.

ಕಾಂತಾರ 2 RISHAB SHETTY

ಕಾಂತಾರ ಯಶಸ್ಸು ಅವರನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿದ್ದರೂ, ಆ ಗೆಲುವಿನ ಅಮಲನ್ನು ತಲೆಗೇರಿಸಿಕೊಳ್ಳದೇ ಹೊಸ ಹೊಸ ಆಲೋಚನೆಯಲ್ಲಿ ರಿಷಬ್ ತೊಡಗಿದ್ದಾರೆ. ಮುಂದಿನ ಕಾಂತಾರ ಸಿನಿಮಾಗಾಗಿ ಅವರು ಈಗಾಗಲೇ ಸಂಶೋಧನೆ ಮಾಡುತ್ತಿದ್ದಾರೆ. ತಮ್ಮದೇ ಸುತ್ತ ಮುತ್ತಲಿನ ಊರುಗಳಿಗೆ, ಕಾಡು ಮೇಡುಗಳಿಗೆ ಅಲೆದು ಕಥೆ ಹುಡುಕುತ್ತಿದ್ದಾರೆ. ಮಾರ್ಚ್ ನಿಂದ ಅದಕ್ಕೆ ಮತ್ತಷ್ಟು ವೇಗ ನೀಡಲಿದ್ದಾರಂತೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

ಈಗಾಗಲೇ ಅವರೇ ಹೇಳಿದಂತೆ, ಕಾಂತಾರ ಸಿನಿಮಾದ ಮುಂದುವರೆದ ಭಾಗ ಬರುವುದಿಲ್ಲವಂತೆ. ಅದಕ್ಕಿಂತ ಮುಂಚಿನ ಕಥೆಯನ್ನು ಕಾಂತಾರ 2 ಚಿತ್ರದಲ್ಲಿ ಹೇಳಲಿದ್ದಾರಂತೆ. ಈ ಕಾರಣದಿಂದಾಗಿಯೇ ಅವರು ತಪಸ್ಸಿನಂತೆ ಕೆಲಸ ಮಾಡಬೇಕಿದೆ. ಈಗಾಗಲೇ ಕಥೆ ಹುಡುಕಾಟ ಮತ್ತು ಬರವಣಿಗೆಯಲ್ಲಿ ತೊಡಗಿಕೊಂಡಿದ್ದರೂ, ಮಾರ್ಚ್ ನಿಂದ ಗಟ್ಟಿಯಾಗಿ ಕೂತು ಗಟ್ಟಿಯಾದ ಕಥೆಯನ್ನೇ ಹೆಣೆಯಲಿದ್ದಾರೆ.

ಕಾಂತಾರ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಮೈಲುಗಲ್ಲು ಸೃಷ್ಟಿ ಮಾಡಿದೆ. ಹಾಗಾಗಿ ಮೊನ್ನೆಯಷ್ಟೇ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಕೂಡ ಬಂದಿದೆ. ಈ ಪ್ರಶಸ್ತಿಯನ್ನು ಅವರು ಇತ್ತೀಚಿಗೆ ಅಗಲಿರುವ ನಿರ್ದೇಶಕ ಭಗವಾನ್ ಮತ್ತು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಿದ್ದಾರೆ.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *