ಪತ್ನಿಯ ಎದೆಹಾಲು ಕದ್ದು ಕುಡಿದ ಆಯುಷ್ಮಾನ್ ಖುರಾನಾ

Public TV
2 Min Read

ಮುಂಬೈ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮತ್ತು ಅವರ ಪತ್ನಿ ತಾಹಿರಾ ಕಶ್ಯಪ್ ಕ್ಯೂಟ್ ಜೋಡಿಗಳಲ್ಲಿ ಒಂದಾಗಿದೆ. ಈ ಜೋಡಿ ಕುರಿತಾದ ಒಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ತಾಹಿರಾ ತನ್ನದಿ 7 ಸಿನ್ಸ್ ಆಫ್ ಬೀಯಿಂಗ್ ಎ ಮದರ್ ಪುಸ್ತಕದಲ್ಲಿ ಉಲ್ಲೇಖಿಸಿದ್ದ ಕೆಲವು ಸಂಗತಿಗಳು ವೈರಲ್ ಆಗಿದೆ. ಆಯುಷ್ಮಾನ್ ಮಾಡಿರುವ ತಮಾಷೆಯ ಘಟನೆಯನ್ನು ಬರೆದುಕೊಂಡಿದ್ದಾರೆ. ಈ ಪುಸ್ತಕವು ಮೊದಲ ಬಾರಿ ತಾಯಿಯಾಗುವ ಮಹಿಳೆಯರು ಮತ್ತು ಸಮಾಜದ ಇತರ ಮಹಿಳೆಯರಿಂದ ಸ್ವೀಕರಿಸುವ ತೀರ್ಪು ಕುರಿತು ವಿವರಿಸಿದ್ದಾರೆ. ಜೊತೆಗೆ ಪತಿ ಆಯುಷ್ಮಾನ್ ತನ್ನ ಎದೆ ಹಾಲನ್ನು ಸೇವಿಸಿದರ ಬಗ್ಗೆ ಹೇಳಿಕೊಂಡಿದ್ದಾರೆ.

ಆಯುಷ್ಮಾನ್ ಪತ್ನಿ ತಾಹಿರಾ ಎರಡನೇ ಹನಿಮೂನ್‍ಗೆ ಬ್ಯಾಂಕಾಕ್ ಹೋಗಲು ನಿರ್ಧರಿಸಿದ್ದರು. ಮೂರು ದಿನಗಳ ಪ್ರವಾಸ ಇದಾಗಿತ್ತು. ಈ ಸಮಯದಲ್ಲಿ ತನ್ನ ಏಳು ತಿಂಗಳ ಮಗು ವಿರಾಜ್‍ವೀರ್‍ನನ್ನು ತನ್ನ ಹೆತ್ತವರ ಆರೈಕೆಯಲ್ಲಿ ಬಿಟ್ಟುಹೋಗುವುದೆಂದು ನಿರ್ಧರಿಸಿದ್ದರು. ತಾಹಿರಾ ಮತ್ತು ಆಯುಷ್ಮಾನ್ ಬ್ಯಾಂಕಾಕ್‍ಗೆ ಹೊರಡುವ ಮೊದಲು ಮಗುವಿಗಾಗಿ ಕೆಲವು ಬಾಟಲಿಯಲ್ಲಿ ಎದೆ ಹಾಲು ತುಂಬಿಸಿ ನಂತರ ವಿಮಾನ ನಿಲ್ದಾಣಕ್ಕೆ ಹೊರಟು ಬಂದರು. ಏರ್ಪೋರ್ಟ್ ತಲುಪಿ ಅಲ್ಲಿ ತಪಾಸಣೆ ಮಾಡುವ ವೇಳೆ ತಾಹಿರಾಗೆ ಮನೆಯಿಂದ ಕರೆ ಬರುತ್ತದೆ. ಮಗುವಿಗಾಗಿ ನೀನು ತುಂಬಿಸಿಟ್ಟಿದ್ದ ಎದೆ ಹಾಲು ಮುಗಿದಿದೆ ಎಂದು ಹೇಳುತ್ತಾರೆ. ಅದು ಮುಗಿದಿದೆ ಎಂಬ ಸುದ್ದಿ ಕೇಳಿ ಆಕೆಗೆ ಶಾಕ್ ಆಗುತ್ತದೆ. ಇಷ್ಟು ಬೇಗ ಹೇಗೆ ಖಾಲಿಯಾಗಿತು ಎಂದು ಆಲೋಚಿಸುತ್ತಾಳೆ. ನಡೆದ ಘಟನೆಯನ್ನು ಗಂಡನ ಬಳಿ ವಿವರಿಸುತ್ತಾಳೆ. ಇದನ್ನೂ ಓದಿ: ಗೌಡ್ರ ಕುಟುಂಬದಲ್ಲಿ ಸಂಭ್ರಮ – ನಿಖಿಲ್, ರೇವತಿ ದಂಪತಿಗೆ ಗಂಡು ಮಗು

ತಾಹಿರಾ ಪತಿಯ ಬಳಿ ಹೇಳಿದಾಗ ಆಯುಷ್ಮಾನ್ ನಗುತ್ತಲೇ ಉತ್ತರಿಸುತ್ತಾರೆ. ಅದರಲ್ಲಿ ಎಲ್ಲ ಪೋಷಕಾಂಶಗಳೂ ತುಂಬಿವೆ ಎಂದು ಹೇಳುತ್ತಾರೆ. ಅಷ್ಟಕ್ಕೂ ಆದಿದ್ದೇನೆಂದರೆ, ಆಯುಷ್ಮಾನ್ ತಾಹಿರಾ ತುಂಬಿಸಿಟ್ಟಿದ ಪೌಷ್ಟಿಕವಾದ ಎದೆ ಹಾಲನ್ನು ಪ್ರೋಟೀನ್ ಶೇಕ್‍ನೊಂದಿಗೆ ಬೆರೆಸಿ ಕುಡಿದಿದ್ದರು. ಅಂದಿನ ಪ್ರವಾಸವನ್ನು ಅವಿಸ್ಮರಣೀಯವನ್ನಾಗಿಸಲು ತನ್ನ ಪತಿ ಆಯುಷ್ಮಾನ್ ಮಗುವಿಗಾಗಿ ತೆಗೆದಿಟ್ಟ ಎದೆ ಹಾಲನ್ನು ಕದ್ದು ಕುಡಿದಿದ್ದಾರೆ ಎಂದು ತಾಹಿರಾ ಪುಸ್ತಕದಲ್ಲಿ ಹೇಳಿದ್ದಾಳೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಸಾಧ್ಯತೆ

Share This Article
Leave a Comment

Leave a Reply

Your email address will not be published. Required fields are marked *