ಬೈಕ್, ಲಾರಿ ನಡುವೆ ಅಪಘಾತ: ಆಸ್ಪತ್ರೆಗೆ ಹೋಗ್ತಿದ್ದ ವೃದ್ಧ ಸಾವು

Public TV
0 Min Read

ಮಂಡ್ಯ: ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ವೃದ್ಧರೊಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಕೆ.ಹೊನ್ನಲಗೆರೆ ಗ್ರಾಮದ ಬಳಿ ನಡೆದಿದೆ.

ಹುಲಿಕೆರೆ ಗ್ರಾಮದ 80 ವರ್ಷದ ವೃದ್ಧ ಮರಿಯಣ್ಣ ಸಾವನ್ನಪ್ಪಿದ್ದಾರೆ. ಯುವಕರಾದ ಲೋಕೇಶ್ ಮತ್ತು ಸಚಿನ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮರಿಯಣ್ಣ ಅನಾರೋಗ್ಯದಿಂದ ಬಳಲುತ್ತಿದ್ದರು. ಆದ್ದರಿಂದ ಅವರನ್ನು ಆಸ್ಪತ್ರೆಗೆ ತೋರಿಸಲು ಸಚಿನ್ ಮತ್ತು ಲೋಕೇಶ್ ಬೈಕ್‍ನಲ್ಲಿ ಮದ್ದೂರಿಗೆ ಕರೆದುಕೊಂಡು ಬರುತ್ತಿದ್ದರು.

ಈ ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *