370ನೇ ವಿಧಿ ರದ್ದು, ಹುತಾತ್ಮ ಸೈನಿಕರಿಗೆ ಸಲ್ಲಿಸಿದ ಗೌರವ: ಅಮಿತ್ ಶಾ

Public TV
1 Min Read

ಅಹಮದಾಬಾದ್: 370ನೇ ವಿಧಿ ರದ್ದು ಮಾಡಿದ್ದು, ಪ್ರಧಾನಿ ಮೋದಿ ಅವರು ಭಾರತೀಯ ಹುತಾತ್ಮ ಸೈನಿಕರಿಗೆ ಸಲ್ಲಿಸಿದ ಗೌರವ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹೇಳಿದ್ದಾರೆ.

ಇಂದು ಅಹಮದಾಬಾದ್‍ನಲ್ಲಿ ನಡೆದ ಕ್ಷಿಪ್ರ ಕ್ರಿಯ ಪಡೆ (ಆರ್‍ಎಎಫ್) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದು ಮಾಡಿ ರಾಷ್ಟ್ರವನ್ನು ಬಲಪಡಿಸಿದ್ದಾರೆ. ಇದು ಭಾರತೀಯ ಹುತಾತ್ಮ ಸೈನಿಕರಿಗೆ ಮೋದಿ ಸಲ್ಲಿಸಿದ ಗೌರವ ಎಂದು ತಿಳಿಸಿದರು.

ಅಹಮದಾಬಾದ್‍ನಲ್ಲಿ ನಡೆದ ಆರ್‍ಎಎಫ್‍ನ 27 ರೈಸಿಂಗ್ ಡೇ ಕಾರ್ಯಕ್ರಮ ಉದ್ಘಾಟನೆ ಮಾಡಿದ ಅಮಿತ್ ಶಾ, ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಈ ಹಿಂದೆ ಇದ್ದ ಯಾವ ಸರ್ಕಾರವು ನಮ್ಮ ಸೈನಿಕರಿಗೆ ಈ ರೀತಿಯ ಗೌರವ ನೀಡಲು ಯೋಚಿಸಿರಲಿಲ್ಲ. ಆದರೆ ನಮ್ಮ ಸರ್ಕಾರ 370 ನೇ ವಿಧಿಯನ್ನು ತೆಗೆದು ಹಾಕುವ ಮೂಲಕ ನಮ್ಮ ಹುತಾತ್ಮ ಸೈನಿಕರಿಗೆ ಆ ಗೌರವನ್ನು ನೀಡಿದ್ದೇವೆ ಎಂದರು.

ನಾವು 370 ನೇ ವಿಧಿ ರದ್ದು ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದು, ನಾವು ದೇಶಕ್ಕಾಗಿ ಮಾಡಿದ ಮೊದಲ ಕೆಲಸ. ಇದರಿಂದ ಕಾಶ್ಮೀರ ಅಭಿವೃದ್ಧಿಯ ಹಾದಿಯಲ್ಲಿ ಸಾಗಲಿದೆ. ಈಗ ಕಾಶ್ಮೀರದಲ್ಲಿ ಯಾರಾದರೂ ಶಾಂತಿಯನ್ನು ಕದಡುವ ಕೆಲಸ ಮಾಡಿದರೆ ನಮ್ಮ ಭಾರತೀಯ ಸೈನಿಕರು ಅಲ್ಲಿ ಕಾವಲು ಕಾಯುತ್ತಿದ್ದಾರೆ ಎಂದು ನನೆಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *