ಸಲ್ಮಾನ್ ಖಾನ್ ಚಿತ್ರದಿಂದ ಹೊರ ನಡೆದ ತಂಗಿಯ ಪತಿ ಆಯುಷ್‌

Public TV
2 Min Read

ಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ `ಕಭಿ ಈದ್ ಕಭಿ ದಿವಾಲಿ’ ಸಿನಿಮಾದಿಂದ ನಟ ಆಯುಷ್ ಶರ್ಮಾ ಹೊರನಡೆದಿದ್ದಾರೆ. ಅಷ್ಟಕ್ಕೂ ಭಾವ ಮತ್ತು ಭಾಮೈದನ ನಡುವೆ ಏನಾಯ್ತು ಎಂದು  ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ.

ಬಿಟೌನ್ ಸ್ಟಾರ್ ಸಲ್ಮಾನ್ ಖಾನ್ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟ, ಆದರೆ ಅದ್ಯಾಕೋ ಸಲ್ಮಾನ್ ಲಕ್ ಕೈ ಕೊಟ್ಟಂತೆ ಇದೆ. ಇತ್ತೀಚೆಗೆ ನಟಿಸಿದ `ದಬಾಂಗ್ ೩’ ಮತ್ತು ‘ರಾಧೆ’ ಸಿನಿಮಾಗಳು ಅಂದುಕೊಂಡ ಮಟ್ಟಕ್ಕೆ ಗೆದ್ದಿಲ್ಲ. ಹಾಗಾಗಿ, ಈ ಬಾರಿ ಅವರು ಗೆದ್ದೇ ಗೆಲ್ಲಬೇಕು ಎಂಬ ಹಠದೊಂದಿಗೆ `ಕಭಿ ಈದ್ ಕಭಿ ದಿವಾಲಿ’ ಸಿನಿಮಾ ಶುರು ಮಾಡಿದ್ದಾರೆ. ಅಷ್ಟೇಅಲ್ಲ, ಸೌತ್ ಸಿನಿಮಾಗಳಿಗೂ ಸಲ್ಮಾನ್ ಖಾನ್ ಗ್ರೀನ್ ಸಿಗ್ನಲ್ ಕೊಡ್ತಿದ್ದಾರೆ. ಆದರೆ ಈಗ ಸಲ್ಲು ನಟನೆಯ `ಕಭಿ ಈದ್ ಕಭಿ ದಿವಾಲಿ’ ಚಿತ್ರದಿಂದ ಭಾಮೈದ ಆಯುಷ್ ಶರ್ಮಾ ಹೊರ ನಡೆದಿರುವುದರ ಕುರಿತು ಭಾರೀ ಚರ್ಚೆಯಾಗುತ್ತಿದೆ.

ಈ ಚಿತ್ರ ಶುರುವಾದಗಿನಿಂದ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗಲೇ ಇದೆ. ಈ ಸಿನಿಮಾಗೆ ಒಂದಾದ ಮೇಲೊಂದು ತೊಡಕುಗಳು ಎದುರಾಗುತ್ತಲೇ ಇವೆ. ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಖಾನ್‌ರ ಪತಿ ಆಯುಷ್ ಶರ್ಮಾ ಈ `ಕಭಿ ಈದ್ ಕಭಿ ದಿವಾಲಿ’ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಅವರೀಗ ಸಿನಿಮಾದ ಭಾಗವಾಗಿ ಉಳಿದಿಲ್ಲ. ಕೆಲವು ಕಾರಣಗಳಿಂದಾಗಿ ಅವರು ಸಿನಿಮಾದಿಂದ ಹೊರನಡೆದಿದ್ದಾರೆ. ಇದನ್ನೂ ಓದಿ: ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ `ಕಿಸ್’ ಬ್ಯೂಟಿ ಶ್ರೀಲೀಲಾ

ಸಲ್ಮಾನ್ ಖಾನ್ ಮತ್ತು ಆಯುಷ್ ಶರ್ಮಾ ಮಧ್ಯೆ ಉತ್ತಮ ಭಾಂದವ್ಯ ಇದೆ. ಭಾಮೈದ ಆಯುಷ್‌ಗಾಗಿ `ಲವ್ ಯಾತ್ರಿ’, `ಅಂತಿಮ್’ ಸಿನಿಮಾಗಳನ್ನು ಸಲ್ಮಾನ್ ನಿರ್ಮಾಣ ಮಾಡಿದ್ದರು. ಅಷ್ಟೇ ಅಲ್ಲದೆ, `ಅಂತಿಮ್’ ಸಿನಿಮಾದಲ್ಲಿ ಆಯುಷ್ ಜೊತೆಗೆ ತೆರೆಹಂಚಿಕೊಂಡಿದ್ದರು. ಇದೀಗ ಸಲ್ಲು ಹೊಸ ಚಿತ್ರದಲ್ಲಿ ಸಲ್ಮಾನ್ ಜೊತೆಗೆ ಆಯುಷ್ ನಟಿಸುತ್ತಾರೆ ಎಂದು ಕಾದಿದ್ದವರಿಗೆ ಶಾಕ್ ಆಗಿದೆ. ಚಿತ್ರತಂಡವು ಕಭಿ ಈದ್ ಕಭಿ ದಿವಾಲಿ ಸಿನಿಮಾದ ಶೂಟಿಂಗ್ ಆರಂಭಿಸಿದೆ. ಆದರೆ ಸಲ್ಮಾನ್ ಖಾನ್ ಫಿಲ್ಮ್ಸ್ ಮತ್ತು ಆಯುಷ್ ಮಧ್ಯೆ ಕೆಲವು ಕ್ರಿಯೇಟಿವ್ ಡಿಫರೆನ್ಸ್ ಉಂಟಾಗಿದೆ. ಹಾಗಾಗಿ ಆಯುಷ್ ಈ ಸಿನಿಮಾದಿಂದ ಹೊರನಡೆಯಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ. ಮನಸ್ತಾಪಗಳನ್ನೆಲ್ಲಾ ಮರೆತು ಭಾವನಿಗಾಗಿ ಆಯುಷ್ ಮತ್ತೆ ಈ ಚಿತ್ರದಲ್ಲಿ ನಟಿಸುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *