ತೈಲ ಬೆಲೆ ಏರಿಸಬೇಕು ಎಂದ ಆಪ್ ಕಾರ್ಯಕರ್ತನಿಗೆ ಮುಖಂಡನಿಂದ ಕಪಾಳಮೋಕ್ಷ – ವಿಡಿಯೋ ನೋಡಿ

Public TV
1 Min Read

ಬೆಳಗಾವಿ: ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ವೇಳೆ ತಪ್ಪಾಗಿ ತೈಲ ಬೆಲೆ ಏರಿಸಬೇಕು ಎಂದು ಘೋಷಣೆ ಕೂಗಿದ ಎಎಪಿ ಕಾರ್ಯಕರ್ತನಿಗೆ ಮುಖಂಡರೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಮ್ ಆದ್ಮಿ ಪಕ್ಷದಿಂದ ತೈಲ ಬೆಲೆ ಖಂಡಿಸಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತನೊಬ್ಬ ತೈಲ ಬೆಲೆ ಏರಿಸಲೇಬೇಕು ಎಂದು ಘೋಷಣೆಯನ್ನು ಕೂಗಿದ್ದಾರೆ. ಇದರಿಂದ ಆಕ್ರೋಶಗೊಂಡು ಅಲ್ಲೆ ಇದ್ದ ಮುಖಂಡ ಸದಾನಂದ್ ಬಾಮನೆ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ.

ದೇಶದೆಲ್ಲೆಡೆ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಬೆಳಗಾವಿಯಲ್ಲೂ ಬಂದ್ ಗೆ ಕರೆ ನೀಡಿದ್ದರು. ಈ ವೇಳೆ ಕಾರ್ಯಕರ್ತ ತೈಲ ಬೆಲೆ ಇಳಿಸಬೇಕು ಎಂದು ಹೇಳುವ ಬದಲು ತೈಲ ಬೆಲೆ ಏರಿಸಬೇಕು ಎಂದು ಕೂಗಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *