ಬೆಂಗಳೂರು: ವಯಸ್ಸಾದ ಪೋಷಕರು ಮಗನನ್ನು ಮದುವೆ ಮಾಡಿಕೋ ಎಂದು ಗೋಗರಿಯುತ್ತಿದ್ದರಿಂದ ಮನನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಧ್ಯಪ್ರದೇಶ ಮೂಲದ ಅಜಯ್ (23) ಆತ್ಮಹತ್ಯೆ ಶರಣಾದ ಯುವಕ. ಟೈಲ್ಸ್ ಕೆಲಸ ಮಾಡಿಕೊಂಡು ವರ್ತೂರು ಸಮೀಪದ ಮುಳ್ಳೂರು ಗ್ರಾಮದಲ್ಲಿ ನೆಲಸಿದ್ದ ಅಜಯ್ ಗೆ ಮಧ್ಯಪ್ರದೇಶದಲ್ಲಿ ನೆಲೆಸಿರುವ ವಯಸ್ಸಾದ ಪೋಷಕರು ಸೋಮವಾರ ಹುಡುಗಿಯ ಫೋಟೋ ಕಳುಹಿಸಿ ಮದುವೆ ಮಾಡಿಕೋ ಎಂದು ತಿಳಿಸಿದ್ದರಂತೆ.
ಮದುವೆ ಮಾಡಿಕೊಳ್ಳಲು ಇಷ್ಟವಿಲ್ಲದ ಅಜಯ್ ಇದೇ ವಿಷಯಕ್ಕೆ ಮನನೊಂದು ಕಳೆದ ರಾತ್ರಿ ಮುಳ್ಳೂರು ಗ್ರಾಮದ ಹೊರವಲಯದಲ್ಲಿನ ನೀಲಗಿರಿ ತೋಪಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿದ ವರ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.