ದೇಶ, ದೇವರ ಬಗ್ಗೆ I.N.D.I.A ನಾಯಕರ ವಿವಾದಾತ್ಮಕ ಹೇಳಿಕೆ

Public TV
1 Min Read

ನವದೆಹಲಿ: ಲೋಕಸಭಾ ಚುನಾವಣೆ (Loksabha Elections) ಸನಿಹದಲ್ಲಿ ವಿಪಕ್ಷ ಐಎನ್‍ಡಿಐಎ ಕೂಟದ ನಾಯಕರು ವಿವಾದಾತ್ಮಕ ಹೇಳಿಕೆಗಳ ಮೂಲಕ ಸದ್ದು ಮಾಡತೊಡಗಿದ್ದಾರೆ.

ದೇಶ, ದೇವರು, ರಾಮ, ರಾಮಾಯಣ, ರಾಮಮಂದಿರ ಮತ್ತು ಪ್ರಧಾನಿ ಮೋದಿ ವಿಚಾರವಾಗಿ ಕಾಂಗ್ರೆಸ್, ಡಿಎಂಕೆ ಮತ್ತು ಟಿಎಂಸಿಯ ಮೂವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಡಿಎಂಕೆ ಎ ರಾಜಾ ಅಂತೂ ಇಂಡಿಯಾ ಅಂದ್ರೆ ದೇಶ ಅಲ್ಲ. ಅದು ಉಪಖಂಡ ಎಂದಿದ್ದಾರೆ. ಮಣಿಪುರದಲ್ಲಿ ನಾಯಿ ಮಾಂಸ ತಿನ್ನುವುದು ಕೂಡ ಸಂಸ್ಕೃತಿ. ಕೆಲವರು ಬೀಫ್ ತಿನ್ನುತ್ತಾರೆ, ಅದು ಅವರ ಸಂಸ್ಕೃತಿ. ಅದನ್ನು ಗೌರವಿಸಬೇಕು ಎಂದಿದ್ದಾರೆ.

ಈತನೇ ದೇವರು ಅಂದ್ರೆ.. ಜೈಶ್ರೀರಾಮ್, ಭಾರತ್ ಮಾತಾಕಿ ಜೈ ಅಂದ್ರೆ ಅದನ್ನು ತಮಿಳುನಾಡು  (Tamilnadu) ಅಂಗೀಕರಿಸಲ್ಲ. ನಾನು ರಾಮಾಯಣವನ್ನು ನಂಬಲ್ಲ. ಎಂದೆಲ್ಲಾ ಮಾತಾಡಿದ್ದಾರೆ. ಇದನ್ನೂ ಓದಿ: ನೀವು ಜೈಶ್ರೀರಾಮ್‌ ಜಪಿಸುತ್ತಾ ಹಸಿವಿನಿಂದ ಸಾಯಬೇಕೆಂದು ಪ್ರಧಾನಿ ಬಯಸುತ್ತಾರೆ: ರಾಗಾ ಟೀಕೆ

ರಾಹುಲ್ ಗಾಂಧಿ (Rahul Gandhi) ಮಾತನಾಡಿ, ದೇಶದಲ್ಲಿ ನಿರುದ್ಯೋಗ, ಹಸಿವಿನ ಸಾವು ಹೆಚ್ಚುತ್ತಿದೆ. ಆದ್ರೆ ಮೋದಿ ಮಾತ್ರ ಜೈಶ್ರೀರಾಮ್ ಅಂತಾ ಕೂಗಿ ಎನ್ನುತ್ತಿದ್ದಾರೆ. ನೀವು ಜೈಶ್ರೀರಾಮ್ ಎಂದು ಹೇಳುತ್ತಾ ಹಸಿವಿನಿಂದ ಸಾಯಬೇಕು ಎಂದು ಪ್ರಧಾನಿ ಬಯಸ್ತಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಟಿಎಂಸಿಯ ರಾಮೆಂದು ಸಿನ್ಹಾ ರಾಯ್ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅಯೋಧ್ಯೆಯ ರಾಮಮಂದಿರ ಅಪವಿತ್ರ ಪ್ರದೇಶ.. ಹಿಂದೂಗಳ್ಯಾರು ಅಲ್ಲಿ ಹೋಗಿ ಪೂಜಿಸಬಾರದು ಎಂದು ನಾಲಗೆ ಹರಿಬಿಟ್ಟಿದ್ದಾರೆ.

Share This Article