ಗಲಾಟೆ ವೇಳೆ ಗರ್ಭಿಣಿಯ ಹೊಟ್ಟೆಗೆ ಕಲ್ಲುಬಿದ್ದು ಗರ್ಭಪಾತ!

Public TV
0 Min Read

ಚಿತ್ರದುರ್ಗ: ಹಳೆ ದ್ವೇಷ ವೈಷಮ್ಯ ಹಿನ್ನಲೆಯಲ್ಲಿ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಗುರುವಾರ ರಾತ್ರಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹೊರವಲಯದ ಬಬ್ಬೂರು ಬೋವಿ ಕಾಲೋನಿಯಲ್ಲಿ ನಡೆದಿದೆ.

ಈ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಗುರುವಾರ ರಾತ್ರಿ ನಡೆದ ಘಟನೆಯಲ್ಲಿ ಎರಡು ಕಾರುಗಳ ಗಾಜು ಜಖಂ ಆಗಿದೆ. ಗಲಾಟೆಯನ್ನು ನೋಡಲು ಬಂದ ಮಹಿಳೆಯ ಮೇಲೆ ಅಕಸ್ಮಾತ್ ಆಗಿ ಕಲ್ಲು ಬಂದು ಬಿದಿದ್ದು, ಘಟನೆಯಲ್ಲಿ ಹೊಟ್ಟೆಯಲ್ಲಿದ್ದ ಎರಡು ತಿಂಗಳ ಭ್ರೂಣ ಹತ್ಯೆಯಾಗಿ ಗರ್ಭಪಾತವಾಗಿದೆ.

ಗುಂಪು ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದ ಮಣಿ, ಮಂಜುನಾಥ್, ಹರೀಶ್ ನನ್ನು ಹಿರಿಯೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *