ಜಾನುವಾರುಗಳನ್ನು ತಪ್ಪಿಸಲು ಹೋಗಿ ಪೊಲೀಸ್‌ ವಾಹನ ಪಲ್ಟಿ

Public TV
1 Min Read

ಯಾದಗಿರಿ: ಜಾನುವಾರುಗಳ ಮೇಲಾಗುವ ಅಪಘಾತ ತಪ್ಪಿಸಲು ಹೋಗಿ ಪೊಲೀಸ್‌ ವಾಹನವೇ ಪಲ್ಟಿ ಹೊಡೆದ ಘಟನೆ ವಡಗೇರಾ ತಾಲೂಕಿನ ಖಾನಾಪುರ ಬಳಿ ನಡೆದಿದೆ.

ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ಕಲಬುರಗಿಯ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಪಿಐ ಪಂಚಾಕ್ಷರಯ್ಯ, ಪೊಲೀಸ್‌ ಪೇದೆ ಪ್ರಶಾಂತ ಹಾಗೂ ಚಾಲಕ ಶ್ರೀಶೈಲ್ ಗಾಯಗೊಂಡಿದ್ದು, ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ ರಾತ್ರಿ ಕೋರ್ಟ್ ಕೆಲಸ ಮುಗಿಸಿಕೊಂಡು ಬೊಲೆರೊ ಪೊಲೀಸ್‌ ವಾಹನದಲ್ಲಿ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ಕಲಬುರಗಿಗೆ ತೆರಳುತ್ತಿದ್ದರು. ಖಾನಾಪುರ ಸಮೀಪದಲ್ಲಿ ಜಾನುವಾರುಗಳಿಗೆ ಬೊಲೆರೊ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಶ್ರೀಶೈಲ್ ಪ್ರಯತ್ನಿಸಿದರು. ಆದರೆ ಬೊಲೆರೊ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮ ಅದರಲ್ಲಿದ್ದ ಮೂವರಿಗೂ ಗಾಯಗಳಾಗಿವೆ.

ಈ ಘಟನೆ ವಡಗೇರಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *