ವಿಧಾನಸೌಧದ ಮುಂದೆಯೇ ವ್ಯಕ್ತಿಯಿಂದ ಆತ್ಮಹತ್ಯೆಗೆ ಯತ್ನ!

Public TV
1 Min Read

ಬೆಂಗಳೂರು: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನನಗೆ ಮೋಸ ಆಗಿದೆ ಅಂತಾ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಧಾನಸೌಧ ಕೆಂಗಲ್ ಗೇಟ್ ಬಳಿ ನಡೆದಿದೆ.

ಗೌರಿಬಿದನೂರಿನ ಜಾಲಹಳ್ಳಿ ನಿವಾಸಿ ಗಂಗಾಧರ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಗಂಗಾಧರ್ ಅವರು ಬೆಂಗಳೂರಿನ ಶಿವಪ್ಪ ಎಂಬವರ ಜತೆ ಸೇರಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು, ಈಗ ಶಿವಪ್ಪ ಅವರಿಂದ ತಮಗೆ ಮೋಸವಾಗಿದ್ದು, ಸೂಕ್ತ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿ ಗಂಗಾಧರ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವಿಸಿ ಅಸ್ವಸ್ಥರಾಗಿರುವ ಗಂಗಾಧರ್ ಅವರನ್ನು ನಗರದ ಮಲ್ಲಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಲವು ದಿನಗಳ ಹಿಂದೆ ಮೂರು ಎಕರೆ ಜಮೀನು ಮಾರಾಟದಲ್ಲಿ ಶಿವಪ್ಪ 60 ಲಕ್ಷ ರೂ. ಹಣ ಮೋಸ ಮಾಡಿದ್ದಾರೆ. ಈ ಸಂಬಂಧ ಸಂಬಂಧ ನಾನು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಆದರೆ ಶಿವಪ್ಪ ಶಾಸಕ ಬೈರತಿ ಸುರೇಶ್ ಅವರ ಸಂಬಂಧಿಯಾಗಿರುವ ಕಾರಣ ಯಾವುದೇ ಅಧಿಕಾರಿಗಳು ಶಿವಪ್ಪ ಅವರ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಗಂಗಾಧರ್ ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *