ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಭೀಕರ ಕೊಲೆ

Public TV
1 Min Read

ಬಳ್ಳಾರಿ: ವ್ಯಕ್ತಿಯೊಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಭೀಕರವಾಗಿ ಕೊಲೆ ಮಾಡಿರುವ ಘಟನೆ ಬಳ್ಳಾರಿಯ(Ballari) ಕಣೇಕಲ್ ರಸ್ತೆಯ ರಾಣಿತೋಟ ಏರಿಯಾದಲ್ಲಿ ಇಂದು ಮುಂಜಾನೆ ನಡೆದಿದೆ.

ಸಿರುಗುಪ್ಪ(Siruguppa) ತಾಲೂಕಿನ ಕೊಂಚಗೇರಿ ಗ್ರಾಮದ ವೆಂಕಟೇಶ್ ಕೊಲೆಯಾಗಿರುವ ವ್ಯಕ್ತಿ. ರಾಣಿತೋಟದ ಜುಮ್ಮಾ ಮಸೀದಿಯ ಬಳಿ ದುಷ್ಕರ್ಮಿಗಳು ವೆಂಕಟೇಶ್‌ನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಚಾಮರಾಜನಗರ| ನದಿಯಲ್ಲಿ ಈಜಲು ಹೋಗಿ ಯುವಕ ನೀರುಪಾಲು

ಹತ್ಯೆಯ ವಿಷಯ ತಿಳಿದ ಮೃತ ವೆಂಕಟೇಶ್ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ವೆಂಕಟೇಶ್ ಕೊಲೆಗೆ ಪತ್ನಿ ನೀಲಮ್ಮ ಹಾಗೂ ಕುಟುಂಬಸ್ಥರೇ ಕಾರಣ ಎಂದು ಮೃತ ವೆಂಕಟೇಶ್ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಸೆಕೆಯಿಂದ ಕಂಗೆಟ್ಟನಾ ಕಾಡಿನ ರಾಜ? – ಮಧ್ಯರಾತ್ರಿ ಮನೆಯೊಳಗೆ ಬಂದು ಫ್ರಿಡ್ಜ್ ಮೇಲೆ ಕುಳಿತ ಸಿಂಹ!

ಮೃತ ವೆಂಕಟೇಶ್ ಹಾಗೂ ನೀಲಮ್ಮ ಮದುವೆ ಆಗಿ 10 ವರ್ಷಗಳಾಗಿತ್ತು. ಮದುವೆ ಆದ ಮೇಲೆ ಮನೆ ಅಳಿಯನಾಗಿ ಬಂದಿದ್ದ ವೆಂಕಟೇಶ್‌ಗೆ ಪತ್ನಿ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು ಎಂದು ವೆಂಕಟೇಶ್ ತಾಯಿ ದೊಡ್ಡ ಬಸಮ್ಮ ಆರೋಪಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ

ಘಟನೆ ಕುರಿತು ಬ್ರೂಸ್ ಪೇಟೆ ಠಾಣೆಯಲ್ಲಿ(Bruce Pete Police Station) ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Share This Article