ಸೈಕಲ್ ಸ್ಟಂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

By
1 Min Read

ಮುಂಬೈ: ವೇಗವಾಗಿ ಬಂದು ನಿಯಂತ್ರಣ ತಪ್ಪಿ ಸೈಕಲ್ ಗೋಡೆಗೆ ಬಡಿದು ಸೈಕಲ್ ಸವಾರ ಸಾವಾಗಿರುವ ಘಟನೆ ಮುಂಬೈನ (Mumbai) ಘೋಡ್‌ಬಂದರ್ ಫೋರ್ಟ್‌ನಲ್ಲಿ ನಡೆದಿದೆ.

ನೀರಜ್ ಯಾದವ್ (16) ಮೃತ ಯುವಕ. ನೀರಜ್ ಸೋಮವಾರ ಘೋಡಬಂದರ್ ಕೋಟೆಗೆ ಸೈಕಲ್‌ನಲ್ಲಿ ಹೋಗಿದ್ದ. ಕಡಿದಾದ ಇಳಿಜಾರಿನಲ್ಲಿ ವೇಗವಾಗಿ ಚಲಿಸಿ, ಸೈಕಲ್ ನಿಯಂತ್ರಣ ತಪ್ಪಿ ಮನೆಯೊಂದರ ಗೇಟ್ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಇದನ್ನೂ ಓದಿ: ಬಿಜಿಎಸ್ ಆಸ್ಪತ್ರೆಗೆ ದಾಖಲಾದ ದರ್ಶನ್ – ವೈದ್ಯಕೀಯ ತಪಾಸಣೆ ಬಗ್ಗೆ ವೈದ್ಯರು ಹೇಳಿದ್ದೇನು?

ಡಿಕ್ಕಿ ಹೊಡೆದ ರಭಸಕ್ಕೆ ಯುವಕ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಸ್ಥಳೀಯರು ಆತನನ್ನು ಹತ್ತಿರದ ಬಾಬಾ ಸಾಹೇಬ್ ಅಂಬೇಡ್ಕರ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ಯುವಕ ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ. ಇದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗರ್ಲ್‌ಫ್ರೆಂಡ್ಸ್‌ ಜೊತೆ ಸೇರಿ ಪತ್ನಿಗೆ ಅನಸ್ತೇಷಿಯಾ ನೀಡಿ ಹತ್ಯೆ – ಮೂವರು ಅರೆಸ್ಟ್‌

Share This Article