ಕ್ಷುಲ್ಲಕ ಕಾರಣಕ್ಕೆ ಬಾರ್ ಮುಂದೆ ಹೊಡೆದಾಡಿಕೊಂಡ ಕುಡುಕರ ಗುಂಪು

Public TV
1 Min Read

ಹುಬ್ಬಳಿ: ಕುಡಿದ ಮತ್ತಿನಲ್ಲಿ ಕುಡುಕರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ತಡರಾತ್ರಿ ನಗರದ ಕೇಶ್ವಾಪುರದ ಕಿಂಗ್ಸ್ ಬಾರ್ ಬಳಿ ನಡೆದಿದೆ.

ಕ್ಷುಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಎಣ್ಣೆ ಮತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರೂ ಸ್ಥಳಿಯರು ಜಗಳ ಬಿಡಿಸಲಿಲ್ಲ. ಕೊನೆಗೂ ಹೊಡೆದಾಡಿಕೊಂಡ ಗುಂಪುಗಳ ಸದಸ್ಯರು ತಾವೇ ಹೊರಟು ಹೋಗಿದ್ದಾರೆ.

ಈ ಎರಡು ಗುಂಪಿನ ಯುವಕರ ಹೊಡೆದಾಟವನ್ನು ಸ್ಥಳಿಯರು ತಮ್ಮ ಮೊಬೈಲ್ ಗಳಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಆದರೆ ಹೊಡೆದಾಡಿಕೊಂಡವರ ಹೆಸರು ತಿಳಿದು ಬಂದಿಲ್ಲ. ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದೂರು ದಾಖಲಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *