ಕಾರ್ಯಕ್ರಮಕ್ಕೆ ಬಂದಿದ್ದ ಕೆನಡಾ ಉರ್ದು ಸಾಹಿತಿಗೆ ಹೃದಯಾಘಾತ

By
1 Min Read

ಬೀದರ್: ಉತ್ತರಪ್ರದೇಶ (Uttarpradesh) ಮೂಲದ ಕೆನಡಾದಲ್ಲಿ (Canada) ವಾಸವಾಗಿದ್ದ ಉರ್ದು ಕವಿ ಹಾಗೂ ಸಾಹಿತಿ ಮುಷಾಯಿರಾ (Mushaira) ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದಿದೆ.

ತಾರೀಕ್ ಪಾರೂಕ್ (78) ಹೃದಯಾಘಾತದಿಂದ ಸಾವನ್ನಪ್ಪಿದ ಸಾಹಿತಿ. ಇವರು ಮುಷಾಯಿರಾ ಕಾರ್ಯಕ್ರಮ ಹಿನ್ನೆಲೆ ಬಸವಕಲ್ಯಾಣಕ್ಕೆ ಬಂದಿದ್ದರು. ಇದನ್ನೂ ಓದಿ; ದೂರು ಕೊಟ್ಟ ಪತ್ನಿಗೆ ಠಾಣೆಯಲ್ಲೇ ಇರಿದ ಪಾಪಿ ಪತಿ!

ಟೆಕ್ನೋಕ್ರೆಟ್ ಹಾಗೂ ಸಾಹಿತ್ಯಾಭಿಮಾನಿಗಳ ಸಂಘದಿಂದ ಮುಷಾಯಿರಾ ಹಾಗೂ ಕವಿಗೋಷ್ಟಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನವೇ ಎದೆನೋವು ಹಿನ್ನೆಲೆ ಕವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಇಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಿದ್ದು ಉತ್ತರಪ್ರದೇಶದ ಅಲಿಗಢ್‍ಗೆ ಮೃತದೇಹ ರವಾನೆ ಮಾಡಲಾಗಿದೆ.

Share This Article