ವೀಡಿಯೋ: ಕೊಟ್ಟೂರೇಶ್ವರ ಜಾತ್ರೆಯಲ್ಲಿ ರಥ ಬೀಳೋ ಮೊದ್ಲೇ ನಡೆದಿತ್ತು ಅಚ್ಚರಿ

Public TV
1 Min Read

– ಭಕ್ತರನ್ನ ಹೆದರಿಸಿ ಓಡಿಸಿದ್ದ ಬಸವಣ್ಣ

ಬಳ್ಳಾರಿ: ಕಳೆದು ತಿಂಗಳು ಜಿಲ್ಲೆಯಲ್ಲಿ ನಡೆದ ಕೊಟ್ಟೂರೇಶ್ವರ ಜಾತ್ರೆಯಲ್ಲಿ ದೇವರ ರಥ ಬಿದ್ದು ಭಕ್ತರನ್ನು ಆತಂಕಕ್ಕೀಡು ಮಾಡಿತ್ತು. ಆದ್ರೆ ರಥ ಬೀಳುವ ಮೊದಲೇ ಅದರ ಬಗ್ಗೆ ಸೂಚನೆ ಸಿಕ್ಕಿತ್ತು ಅಂತ ಭಕ್ತರು ಇದೀಗ ಮಾತನಾಡಿಕೊಳ್ತಿದ್ದಾರೆ.

ಇದಕ್ಕೆ ಸಾಕ್ಷಿ ಎಂಬಂತೆ ರಥ ಬೀಳುವ ಮೂರು ನಿಮಿಷಗಳ ಮೊದಲು ದೇವಸ್ಥಾನಕ್ಕೆ ಸೇರಿದ್ದ ಗೂಳಿಯೊಂದು ಭಕ್ತರನ್ನ ಓಡಿಸಿದೆ. ಆಶ್ಚರ್ಯ ಅಂದ್ರೆ ರಥ ಬೀಳುವ ಜಾಗದಲ್ಲಿದ್ದ ಭಕ್ತರನ್ನೇ ಚದುರಿಸಿದ್ದು, ಬಸವಣ್ಣ ಯಾರಿಗೂ ಸಣ್ಣ ಗಾಯವನ್ನೂ ಮಾಡಿಲ್ಲ. ಬಸವಣ್ಣನ ಎಚ್ಚರಿಕೆಯಿಂದಲೇ 60 ಅಡಿ ರಥ ನೆಲಕ್ಕೆ ಉರುಳಿದ್ರೂ ಯಾವುದೇ ಸಾವು ಸಂಭವಿಸಿಲ್ಲ ಅಂತಾ ಜನ ಹೇಳ್ತಿದ್ದಾರೆ.

ಕಳೆದ ಫೆಬ್ರವರಿ 22ರಂದು ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರು ಗುರುಬಸವೇಶ್ವರ ರಥೋತ್ಸವದ ವೇಳೆಯಲ್ಲಿ ಚಕ್ರದ ಅಚ್ಚು ಮುರಿದು ರಥ ಮಗುಚಿ ಬಿದ್ದಿತ್ತು. ಪ್ರತಿ ವರ್ಷ ನಡೆಯುವ ಗುರು ಬಸವೇಶ್ವರ ರಥೋತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಈ ವರ್ಷವೂ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.

ಇದನ್ನೂ ಓದಿ: ಬಳ್ಳಾರಿ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಉರುಳಿ ಬಿದ್ದ ರಥ

Share This Article
Leave a Comment

Leave a Reply

Your email address will not be published. Required fields are marked *