ದಟ್ಟ ಕಾನನದ ಮಧ್ಯೆ ಅವಿತಿದೆ ಅದ್ಭುತ ಫಾಲ್ಸ್- ನೀವೂ ಒಂದು ಬಾರಿ ಭೇಟಿ ನೀಡಿ

Public TV
1 Min Read

ಚಿಕ್ಕಮಗಳೂರು: ಆ ಫಾಲ್ಸ್ ನೋಡೋಕೆ ಅದ್ಭುತ, ಅತ್ಯದ್ಭುತ ಹಾಗೂ ಅನನ್ಯ. ಆದರೆ ಅದೆಷ್ಟೋ ಕಾಫಿನಾಡಿಗರಿಗೆ ಈ ಜಲಪಾತದ ಪರಿಚಯವಿಲ್ಲ. ಆದರೆ ಇಲ್ಲಿಗೆ ಹೋಗಬೇಕೆಂದರೆ ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡಂತೆ. ಇತ್ತೀಚಿನ ಸೆಲ್ಫಿಗಳಿಗೆ ಇಲ್ಲೂ ಕೂಡ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಪ್ರವಾಸಿ ಜಿಲ್ಲೆ ಚಿಕ್ಕಮಗಳೂರಿನಲ್ಲಿ ಅದೆಷ್ಟೋ ಪ್ರವಾಸಿಗರ ಕಣ್ಣಿಗೆ ಕಾಣದೇ ಮರೆಯಾಗಿರೋ ಫಾಲ್ಸ್ ಅಂದರೆ ಅದು ಕುಮಾರಗಿರಿ ಫಾಲ್ಸ್. ಚಿಕ್ಕಮಗಳೂರಿನಿಂದ ಕೈಮರ ಮಾರ್ಗವಾಗಿ ಮಲ್ಲೇನಹಳ್ಳಿಯಿಂದ ಕುಮಾರಗಿರಿ ದೇವಸ್ಥಾನ ದಾಟಿ ಕಾಮೇನಹಳ್ಳಿಗೆ ಹೋದರೆ ಆ ಫಾಲ್ಸ್ ಸಿಗುತ್ತೆದೆ. ಕಾಡಿನೊಳಗೆ ಒಂದು ಕಿಲೋಮೀಟರ್ ನಡೆದೇ ಹೋಗಬೇಕು. ಹೋಗುವಾಗ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಹೋಗಬೇಕು. ಅದರಲ್ಲೂ ಮಳೆಗಾಲದಲ್ಲಿ ಬಿದ್ದು-ಏಳೋರ ಸಂಖ್ಯೆಯೇ ಹೆಚ್ಚು. ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ.

ಈ ಜಾಗ ಪ್ರವಾಸಿಗರಿಗೆ ಸಖತ್ ಖುಷಿ ಕೊಡುತ್ತೆ. ಹಾಗೆ ಪ್ರವಾಸಿಗರ ಪ್ರಾಣವನ್ನೂ ಕಸಿಯುತ್ತೆ. ಅಂತಾ ಡೆಡ್ಲೀ ಫಾಲ್ಸ್ ಇದು. ಕಳೆದ ವರ್ಷ ಸೆಲ್ಫಿ ತೆಗೆಯಲು ಹೋಗಿ ಇಬ್ಬರು ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಅವರ ಮೃತ ದೇಹವನ್ನು ಹುಡುಕಲು ಪೊಲೀಸ್, ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಎರಡು ದಿನಗಳ ಕಾಲ ಹರಸಾಹಸಪಟ್ಟಿದ್ದರು. ಪ್ರವಾಸಿಗರಿಗೆ ಈ ಸ್ಥಳದ ಪರಿಚಯವಿಲ್ಲ ಹಾಗಾಗಿ ಇಂತಹ ಅನಾಹುತಗಳು ಸಂಭವಿಸ್ತಾನೇ ಇರುತ್ತದೆ. ಸ್ಥಳಿಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬುದ್ಧಿವಾದ ಹೇಳಿ ಕಳುಹಿಸುತ್ತಿದ್ದಾರೆ. ಆದರೂ ಆಗಾಗ ಇಂತಹ ಅನಾಹುತಗಳು ನಡೆಯುತ್ತಿರುತ್ತದೆ.

ಸುತ್ತಲೂ ದಟ್ಟಕಾನನದಿಂದ ಕೂಡಿರೋ ಇಲ್ಲಿ ಒಬ್ಬಿಬ್ಬರು ಹೋದರೆ ಅನಾಹುತ ಸಂಭವಿಸೋದು ಕಟ್ಟಿಟ್ಟ ಬುತ್ತಿ. ಜಲಪಾತ ತೀವ್ರವಾದ ಆಳವಿರೋದರಿಂದ ಸತ್ತರೆ ಹೆಣ ಕೂಡ ಸಿಗಲ್ಲ. ಪ್ರವಾಸೋದ್ಯಮ ಇಲಾಖೆ ಮನಸ್ಸು ಮಾಡಿದರೆ ಇದೊಂದು ಅದ್ಭುತ ಪ್ರವಾಸಿ ತಾಣ ಮಾಡಬಹುದು.

Share This Article
Leave a Comment

Leave a Reply

Your email address will not be published. Required fields are marked *