ಜೀಪು ಹರಿದು ಮನೆ ಅಂಗಳದಲ್ಲಿ ಆಡುತ್ತಿದ್ದ ಕಂದಮ್ಮ ಸಾವು!

Public TV
1 Min Read

ವಿಜಯಪುರ: ಜೀಪ್ ಹತ್ತಿ ಇಳಿದ ಪರಿಣಾಮ ಮನೆಯ ಮುಂದೆ ಆಟವಾಡುತ್ತಿದ್ದ ಮಗುವೊಂದು ಮೃತಪಟ್ಟ ಘಟನೆ ವಿಜುಯಪುರ ನಗರ ಹೊರ ವಲಯದ ಬಾರಾಕುಟ್ರೆ ತಾಂಡಾದಲ್ಲಿ ನಡೆದಿದೆ.

ಅಮನ್ ಕಾಂತು ರಾಠೋಡ (3) ಮೃತ ಕಂದಮ್ಮ. ತಕ್ಷಣವೇ ಚಾಲಕ ಜೀಪ್ ಸಮೇತ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ.

ಬಾರಾಕುಟ್ರೆ ತಾಂಡದ ಅಮನ್ ತನ್ನ ಮನೆಯ ಮುಂದೆ ಆಟವಾಡುತ್ತಿದ್ದ. ಅಮನ್ ಆಟವಾಡುತ್ತಿರುವುದನ್ನು ಗಮನಿಸದ ಚಾಲಕ ಜೀಪ್ ಅಮನ್ ಮೇಲೆ ಹಾಯಿಸಿದ್ದಾನೆ. ಕೆಳಗೆ ಬಿದ್ದಿದ್ದ ಅಮನ್ ತಲೆ ಮೇಲೆ ಜೀಪ್ ಹತ್ತಿಹೋಗಿದ್ದು, ಸ್ಥಳದಲ್ಲಿ ಬಾಲಕ ಅಮನ್ ಮೃತಪಟ್ಟಿದ್ದಾನೆ. ತನ್ನ ತಪ್ಪು ಗಮನಕ್ಕೆ ಬರುತ್ತಿದ್ದಂತೆ ಚಾಲಕ ಜೀಪನ್ನು ವೇಗವಾಗಿ ಚಾಲನೆ ಮಾಡಿ ಪರಾರಿಯಾಗಿದ್ದಾನೆ.

ಘಟನೆಯು 15 ನಿಮಿಷ ತಡವಾಗಿ ಪೋಷಕರು ಗಮನಕ್ಕೆ ಬಂದಿದ್ದು, ಈ ಹೊತ್ತಿನಲ್ಲಿ ಚಾಲಕ ಪರಾರಿಯಾಗಿದ್ದ. ಈ ಕುರಿತು ಮೃತ ಅಮನ್ ಪೋಷಕರು ಜೀಪ್ ಚಾಲಕನ ವಿರುದ್ಧ ವಿಜಯಪುರ ನಗರದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *