ಮೀನುಮರಿ ಸಾಕಾಣಿಕೆ ಮಾಡುವ ಹೊಂಡದಲ್ಲಿ ಮೊಸಳೆ ಮರಿ ಸಿಕ್ತು!

Public TV
1 Min Read

ಮಂಡ್ಯ: ಮೀನುಮರಿ ಸಾಕಾಣಿಕೆ ಮಾಡುವ ಹೊಂಡದಲ್ಲಿ ಮೊಸಳೆ ಮರಿಯೊಂದು ಪತ್ತೆಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದ ಸುರೇಶ್ ಎಂಬವರ ಜಮೀನಿನಲ್ಲಿರುವ ಹೊಂಡದಲ್ಲಿ ಮೊಸಳೆ ಮರಿ ಪತ್ತೆಯಾಗಿದೆ. ಎಂದಿನಂತೆ ಮೀನುಮರಿ ವೀಕ್ಷಣೆ ಮಾಡಲು ಬಂದಾಗ ಮೊಸಳೆ ಮರಿ ಮಲಗಿರೋದನ್ನು ಸುರೇಶ್ ಗಮನಿಸಿದ್ದಾರೆ. ನಂತರ ಅವರನ್ನು ಕಂಡ ಮೊಸಳೆ ಹೊಂಡದೊಳಗೆ ಹೋಗಿ ಅವಿತುಕೊಂಡಿದೆ.

ಬಲೆಯ ಸಹಾಯದಿಂದ ಮೊಸಳೆ ಮರಿಯನ್ನು ಹೊರತೆಗೆದಿದ್ದು, ಸುಮಾರು ಎರಡು ಅಡಿ ಉದ್ದ, ಒಂದೂವರೆ ಕೆಜಿ ತೂಕವಿದೆ. ಜಮೀನಿನ ಸ್ವಲ್ಪ ದೂರದಲ್ಲೇ ಕಾವೇರಿ ನದಿ ಹರಿಯುವದರಿಂದ ಮೊಸಳೆ ಮರಿ ಬಂದಿರಬಹುದು ಎನ್ನಲಾಗಿದೆ.

ಸೆರೆ ಸಿಕ್ಕ ಮೊಸಳೆಮರಿಯನ್ನು ರಂಗನತಿಟ್ಟು ಪಕ್ಷಿಧಾಮಕ್ಕೆ ಹಸ್ತಾಂತರ ಮಾಡೋದಾಗಿ ರೈತ ತಿಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *