ನಾಲ್ವರ ಡೀಲ್ ಬಗ್ಗೆ ಬಾಯ್ಬಿಟ್ಟ ಆರ್ಯವರ್ಧನ್ ಗುರೂಜಿ

Public TV
1 Min Read

ಬಿಗ್ ಬಾಸ್(Bigg Boss House) ಮನೆ ಈಗ ಮೊದಲಿನಂತೆ ಇಲ್ಲ. ದೊಡ್ಮನೆಯ ಅಸಲಿ ಆಟ ಇದೀಗ ಶುರುವಾಗಿದೆ. ಸಾಕಷ್ಟು ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಇದೀಗ ಸಾನ್ಯ, ರೂಪೇಶ್, ರಾಕೇಶ್ ಮತ್ತು ಗುರೂಜಿ ನಡುವೆ ನಡೆದ ಡೀಲ್ ಬಗ್ಗೆ ಇದೀಗ ಸ್ವತಃ ಗುರೂಜಿ ಬಾಯ್ಬಿಟ್ಟಿದ್ದಾರೆ.

ಓಟಿಟಿಯಿಂದ ರಾಕೇಶ್ ಅಡಿಗ, ಸಾನ್ಯ, ರೂಪೇಶ್, ಗುರೂಜಿ ಇದೀಗ ಟಿವಿ ಬಿಗ್ ಬಾಸ್‌ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಇತರೆ ಸ್ಪರ್ಧಿಗಳ ಜೊತೆ ಓಟಿಟಿ ಸ್ಪರ್ಧಿಗಳು ಸಖತ್ ಪೈಪೋಟಿ ಕೊಡುತ್ತಿದ್ದಾರೆ. ಹೀಗಿರುವಾಗ ಈ ನಾಲ್ವರ ಡೀಲ್ ಸ್ಟೋರಿಯನ್ನ ಗುರೂಜಿ(Aryavardhan Guruji) ದೊಡ್ಮನೆಯಲ್ಲಿ ರಿವೀಲ್ ಮಾಡಿದ್ದಾರೆ. ಈ ವಿಷ್ಯ ಕೇಳಿ ಮನೆಮಂದಿ ಶಾಕ್ ಆಗಿದ್ದಾರೆ. ಇದನ್ನೂ ಓದಿ:ಸಾನ್ಯ ಕ್ಯಾಪ್ಟೆನ್ಸಿಗೆ ಕಳಪೆ ಎಂದ ರೂಪೇಶ್‌ ಶೆಟ್ಟಿ

ಬಿಗ್ ಬಾಸ್‌ನಲ್ಲಿ ಎಲ್ಲರ ಮುಂದೆ ಸಾನ್ಯ ಅಯ್ಯರ್(Sanya Iyer) ನೇರವಾಗಿ ನಾಮಿನೇಟ್ ಮಾಡಿರುವುದು ಗುರೂಜಿ ಕೋಪಕ್ಕೆ ಕಾರಣವಾಗಿದೆ. ಈ ವಿಷ್ಯವಾಗಿ ಸಿಡಿದೆದ್ದ ಗುರೂಜಿ, ಡೀಲ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಮೂರನೇ ವಾರದ ವೀಕೆಂಡ್ ಪಂಚಾಯಿತಿಯಲ್ಲಿ ಬಿಗ್ ಬಾಸ್ ಒಂದು ಮ್ಯಾಚ್ ಫಿಕ್ಸಿಂಗ್ ಶೋ ಎಂದು ಆರೋಪ ಮಾಡಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ತಮ್ಮ ಡೀಲ್ ಬಗ್ಗೆ ಹೇಳಿದ್ದಾರೆ.

ಓಟಿಟಿ ಮುಗಿದು ಟಿವಿ ಬಿಗ್ ಬಾಸ್(Bigg Boss)  ಶುರುವಾಗುವ ಗ್ಯಾಪ್‌ನಲ್ಲಿ ರಾಕೇಶ್, ಸಾನ್ಯ, ರೂಪೇಶ್, ಗುರೂಜಿ ರೆಸಾರ್ಟ್‌ನಲ್ಲಿ ವಾರಗಳ ಕಾಲ ಇರಿಸಲಾಗಿತ್ತು. ಈ ಸಮಯದಲ್ಲಿ ನಾಲ್ವರ ಮಧ್ಯೆ ಒಂದು ಡೀಲ್ ಆಗಿತ್ತು. ಯಾರನ್ನ ಯಾರು ನಾಮಿನೇಟ್ ಮತ್ತು ಕಳಪೆ ನೀಡಬಾರದು ಎಂದು ಮಾತಾಗಿತ್ತು. ಈ ಮಾತನ್ನ ಸಾನ್ಯ ತಪ್ಪಿರೋದಕ್ಕೆ ಗುರೂಜಿ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಮಧ್ಯೆ ಇದ್ದ ಡೀಲ್ ಬಗ್ಗೆ ರಿವೀಲ್ ಮಾಡಿದ್ದಾರೆ. ಈ ವಿಚಾರ ಇದೀಗ ಬಿಗ್ ಬಾಸ್ ಮನೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *