ರಸ್ತೆ ಗುಂಡಿಗೆ ಬಿದ್ದು ಭುಜ ಮುರಿದುಕೊಂಡ ಬೈಕ್ ಸವಾರ!

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗುಂಡಿ ಗಂಡಾಂತರ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಬೈಕ್ (Bike) ಸವಾರನೊಬ್ಬ ರಸ್ತೆ ಗುಂಡಿಗೆ ಬಿದ್ದು ಕತ್ತು ಹಾಗೂ ಭುಜದಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜೆಸಿ ನಗರದ ನಿವಾಸಿ 38 ವರ್ಷದ ಬಾಲಾಜಿಯವರು ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ ಯಶವಂತಪುರ ಕ್ಷೇತ್ರದ ಬಿಇಎಲ್ ಸರ್ಕಲ್ ಬಳಿ ಗುಂಡಿಗೆ (Potholes) ಬಿದ್ದಿದ್ದಾರೆ. ಪರಿಣಾಮ ಕುತ್ತ, ಭುಜದ ಭಾಗ, ಕಾಲಿಗೆ ತೀವ್ರ ನೋವು ಕಾಣಿಸಿಕೊಂಡಿದೆ. ಕಾಲಿಗೂ ಹೊಡೆತ ಬಿದ್ದ ಹಿನ್ನೆಲೆ ನಡೆದಾಡಲು ಸಾಧ್ಯವಾಗದೇ ವೀಲ್ ಚೇರ್ ನ ಮೂಲಕವೇ ಓಡಾಟ ನಡೆಸುತ್ತಿದ್ದಾರೆ.

ಈ ಸಂಬಂಧ ಎಕ್ಸ್ ಕ್ಲೂಸಿವ್ ಆಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಾಲಾಜಿ, ನನ್ನ ಈ ಸ್ಥಿತಿಗೆ ಬಿಬಿಎಂಪಿ, ಸರ್ಕಾರನೇ ಕಾರಣ. ನನ್ನ ಸ್ಥಿತಿ ಯಾರಿಗೂ ಬಾರದಿರಲಿ, ಸರ್ಕಾರ ಕೂಡಲೇ ಗುಂಡಿಗಳನ್ನ ಮುಚ್ಚಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ಸೋಮಣ್ಣ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *