ಚಿನ್ನದ ವ್ಯಾಪಾರಿ ಕಣ್ಣಿಗೆ ಖಾರದಪುಡಿ ಎರಚಿ ಚಿನ್ನಾಭರಣ ಕಳ್ಳತನ

Public TV
1 Min Read

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಚಿನ್ನದ ವ್ಯಾಪಾರಿಯ (Gold Seller) ಕಣ್ಣಿಗೆ ಖಾರದಪುಡಿ ಎರಚಿ 30 ಲಕ್ಷ ರೂಪಾಯಿ ಮೌಲ್ಯದ ಸುಮಾರು ಅರ್ಧ ಕೆ.ಜಿ ಚಿನ್ನಾಭರಣ (Gold) ಕಳ್ಳತನ (Theft) ಮಾಡಲಾಗಿದೆ.

ನಿನ್ನೆ ರಾತ್ರಿವೇಳೆ ಅಂಗಡಿಗೆ ಬೀಗ ಹಾಕಿ ಮನೆಗೆ ಹೊರಟಿದ್ದ ಚಿನ್ನದ ವ್ಯಾಪಾರಿ ಶ್ರವಣ್ ಕಣ್ಣಿಗೆ ಖಾರದಪುಡಿ ಎರಚಿ 30 ಲಕ್ಷ ಮೌಲ್ಯದ ಚಿನ್ನಾಭರಣ ಕಸಿದು ಕಳ್ಳರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಎಸಿ ಕಂಪ್ರೆಸರ್ ಬ್ಲಾಸ್ಟ್- ಮೂವರು ಸಾವು

ಮುದಗಲ್‍ನ ರಾಮಲಿಂಗೇಶ್ವರ ಕಾಲೋನಿಯ ಕಮಾನ್ ಬಳಿ ಘಟನೆ ನಡೆದಿದೆ. ಕಮಾನ್ ಬಳಿ ಕಳ್ಳರು ಹೊಂಚು ಹಾಕಿ ಕುಳಿತಿದ್ದರು ಎನ್ನಲಾಗಿದ್ದು, ಶ್ರವಣ್ ಅಂಗಡಿಗೆ ಬಾಗಿಲು ಹಾಕುವ ಸಮಯಕ್ಕೆ ಸರಿಯಾಗಿ ದಾಳಿ ನಡೆಸಿದ ಮೂರು ಜನ ಕಳ್ಳರಿಂದ ಕೃತ್ಯ ನಡೆದಿದೆ. ಘಟನೆ ಹಿನ್ನೆಲೆ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ಎಲ್ಲೆಲ್ಲಿ ಏನಾಗಿದೆ? ಅತಿ ಹೆಚ್ಚು ಮಳೆ ಎಲ್ಲಿಯಾಗಿದೆ?

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *