ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಹೆಚ್ಚಿನ ದರ ಪಡೆದರೆ ಬಸ್ ರೂಟ್‍ಪರ್ಮಿಟ್ ಕ್ಯಾನ್ಸಲ್

Public TV
2 Min Read

ಬೆಂಗಳೂರು: ದಸರಾ ಹಬ್ಬಕ್ಕೆ ಟಿಕೆಟ್ ಬರೆ ಹಾಕುತ್ತಿದ್ದ ಖಾಸಗಿ ಬಸ್ (Private Bus) ಮಾಲೀಕರ ದಂಧೆಗೆ ಸಾರಿಗೆ ಇಲಾಖೆ ಬ್ರೇಕ್ ಹಾಕಿದೆ. ಪಬ್ಲಿಕ್ ಟಿವಿಯು ತನ್ನ ರಹಸ್ಯ ಕಾರ್ಯಾಚರಣೆಯಲ್ಲಿ ಖಾಸಗಿ ಬಸ್‍ಗಳ ಹಗಲು ದರೋಡೆಯ ಕರ್ಮಕಾಂಡದ ಸುದ್ದಿ ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿಯ ಸುದ್ದಿ ಹಿನ್ನೆಲೆಯಲ್ಲಿ ಎಚ್ಚೆತ್ತ ಸಾರಿಗೆ ಇಲಾಖೆ (Transport Department) ಟಿಕೆಟ್ ದಂಧೆಕೋರರಿಗೆ ಬಿಸಿ ಮುಟ್ಟಿಸಿದೆ.

 ಹೌದು, ದಸರಾ ಹಬ್ಬದ ನಿಮಿತ್ತ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳುತ್ತಿರುವ ಪ್ರಯಾಣಿಕರನ್ನು ಬಸ್ ಮಾಲೀಕರ ಸುಲಿಗೆಯಿಂದ ಪಬ್ಲಿಕ್ ಟಿವಿ ಪಾರು ಮಾಡಿದೆ. ಊರುಗಳಿಗೆ ತೆರಳುತ್ತಿರುವ ಪ್ರಯಾಣಿಕರಿಂದ ಖಾಸಗಿ ಬಸ್ ಗಳ ಮಾಲೀಕರು ದುಬಾರಿ ಟಿಕೆಟ್ (Ticket) ಹಣ ಸುಲಿಗೆ ಮಾಡ್ತಿದ್ದರು. ಖಾಸಗಿ ಬಸ್ ಗಳ ಟಿಕೆಟ್ ಮಾರಾಟ ದಂಧೆ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಆಯ್ತು. ಈ ಸುದ್ದಿಯಿಂದಾಗಿ ಎಚ್ಚೆತ್ತ ಸಾರಿಗೆ ಇಲಾಖೆ ಈಗ ಖಾಸಗಿ ಬಸ್ ಗಳ ಕರ್ಮಕಾಂಡಕ್ಕೆ ಬ್ರೇಕ್ ಹಾಕಿದೆ. ಇದನ್ನೂ ಓದಿ: ಪ್ರಯಾಣಿಕರಿಂದ ಸುಲಿಗೆ ಮಾಡುವ ಖಾಸಗಿ ವಾಹನಗಳಿಗೆ ಬ್ರೇಕ್ ಹಾಕಲು ಮುಂದಾದ ಸಾರಿಗೆ ಇಲಾಖೆ

ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರ ಆಗ್ತಿದ್ದ ಹಾಗೆ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಇಲಾಖೆಯ ಸಚಿವ ಶ್ರೀರಾಮುಲು (Sriramulu) ಫೀಲ್ಡಿಗಿಳಿಸಿದ್ದಾರೆ. ಹತ್ತು ವಿಶೇಷ ತಂಡಗಳನ್ನು ರಚಿಸಿ ಖಾಸಗಿ ಬಸ್ ಮಾಲೀಕರ ಟಿಕೆಟ್ ದಂಧೆಗೆ ಬ್ರೇಕ್ ಹಾಕಿದ್ದಾರೆ. ಅಷ್ಟೇ ಅಲ್ಲ, ಬಸ್ ಮಾಲೀಕರು ನಿಗದಿಯಾದಷ್ಟೇ ದರ ಪಡೆಯಬೇಕು. ದುಪ್ಪಟ್ಟು ಹಣಕ್ಕೆ ಟಿಕೆಟ್ ಮಾರಿ ಪ್ರಯಾಣಿಕರ ಸುಲಿಗೆ ಮಾಡಿದ್ರೆ ಪರ್ಮಿಟ್ ರದ್ದು ಮಾಡುವುದರ ಜೊತೆಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮೂಲಕ ಸಾರಿಗೆ ಸಚಿವ ಶ್ರೀರಾಮುಲು ವಾರ್ನಿಂಗ್ ನೀಡಿದ್ದಾರೆ.

ಸಾರಿಗೆ ಅಧಿಕಾರಿಗಳ ವಿಶೇಷ ತಂಡ ರಾಜ್ಯಾದ್ಯಂತ ತಪಾಸಣೆ ಕಾರ್ಯಾಚರಣೆ ನಡೆಸಲಿದೆ. ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣ, ಮೆಜೆಸ್ಟಿಕ್ ಮತ್ತು ಸುತ್ತಲಿನ ಪ್ರದೇಶ, ಶಾಂತಿನಗರ, ಮೈಸೂರು ರಸ್ತೆ ಸೇರಿದಂತೆ ಹಲವೆಡೆ ತಂಡ ಕಾರ್ಯಾಚರಣೆ ನಡೆಸಲಿವೆ. ಅಷ್ಟೇ ಅಲ್ಲ, ಹೆಚ್ಚು ಟಿಕೆಟ್ ದರ ಕೇಳುವ ಬಸ್ ಗಳ ವಿರುದ್ಧ ದೂರು ಕೊಡಲು ಪ್ರಯಾಣಿಕರಿಗಾಗಿ ಸಾರಿಗೆ ಇಲಾಖೆಯು ಸಹಾಯವಾಣಿಯನ್ನು ಆರಂಭಿಸಿದ್ದು, 94498 63429 /94498 63426 ನಂಬರ್‍ಗಳನ್ನು ಸಂಪರ್ಕಿಸಬಹುದು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *