ಆಕಳಿಗೆ ಡಿಕ್ಕಿ ಹೊಡೆಯೋದನ್ನ ತಪ್ಪಿಸಲು ಹೋಗಿ ಕಾರು ಪಲ್ಟಿ – ಮಹಿಳೆ ಸಾವು

By
1 Min Read

ರಾಯಚೂರು: ನಗರದ ಬೈಪಾಸ್ ಬಳಿ ಕಾರು ಪಲ್ಟಿಯಾಗಿ (Car Accident) ಓರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ಹೆದ್ದಾರಿಯಲ್ಲಿ ಆಕಳು (Cow) ಅಡ್ಡ ಬಂದಿದ್ದರಿಂದ ಏಕಾಏಕಿ ಬ್ರೇಕ್ ಹಾಕಿದಾಗ ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಶೈಲಜಾ ಮಲ್ಲಿಕಾರ್ಜುನ (38) ಮೃತ ದುರ್ದೈವಿ. ಬೈಪಾಸ್ ಹತ್ತಿರದ ಅಮರಾವತಿ ಕಾಲೋನಿ (Amaravathi Colony) ಬಳಿ ಘಟನೆ ನಡೆದಿದೆ. ಇದನ್ನೂ ಓದಿ: ಸ್ನಾನದ ವೀಡಿಯೋ ಲೀಕ್‌ ಬೆನ್ನಲ್ಲೇ ಹಾಸ್ಟೆಲ್‌ ತೊರೆಯುತ್ತಿರುವ ವಿದ್ಯಾರ್ಥಿನಿಯರು – 5 ದಿನ ವಿವಿ ಬಂದ್‌

ಕಾರಿನಲ್ಲಿದ್ದ 13 ವರ್ಷದ ಬಾಲಕಿ ಲಕ್ಷ್ಮಿಗೂ ಘಟನೆಯಲ್ಲಿ ಗಂಭೀರ ಗಾಯಗಳಾಗಿವೆ. ಹೈದರಾಬಾದ್‍ನಿಂದ (Hydrabad) ಕೊಪ್ಪಳದ (Koppala) ಚೆನ್ನಳ್ಳಿ ಕ್ಯಾಂಪ್‍ಗೆ ಹೊರಟಿದ್ದ ಕಾರು ಪಲ್ಟಿಯಾಗಿದೆ. ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ (Raichuru Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೆಸಿಆರ್ ಅಭಿಮಾನಿಯ ಕನಸು ನನಸು – 9 ವರ್ಷದ ಬಳಿಕ ಮಗಳ ನಾಮಕರಣ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *