ಕೆಲಸ ಮಾಡದೇ ಹೋದ್ರೆ ಬೂಟಿಂದ ಹೊಡಿತೀನಿ: ನಾಲಗೆ ಹರಿಬಿಟ್ಟ ಉಮೇಶ್ ಕತ್ತಿ

Public TV
1 Min Read

ವಿಜಯಪುರ: ಕೆಲಸ ಮಾಡಿದರೆ ಹೂ ಮಾಲೆ ಹಾಕ್ತೀನಿ, ಇಲ್ಲಂದ್ರೆ ಬೂಟಿನಿಂದ ಹೊಡಿತೀನಿ ಅಂತ ಸಚಿವ ಉಮೇಶ್ ಕತ್ತಿ ಲೋಕೋಪಯೋಗಿ ಇಲಾಖೆ ಎಇಇ ಮೇಲೆ ದರ್ಪದ ಮಾತುಗಳನ್ನಾಡಿದ್ದಾರೆ.

ಬುಧವಾರ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆಗೆಂದು ಉಮೆಶ್ ಕತ್ತಿ ತೆರಳಿದ್ದರು. ಈ ವೇಳೆ ಕಾರ್ಯನಿರ್ವಾಹಕ ಅಭಿಯಂತರ ಸಿಬಿ ಚಿಕ್ಕಲಗಿಗೆ ಕೆಲಸ ಮಾಡಿಲ್ಲ ಎಂದರೆ ಬೂಟಿನಿಂದ ಹೊಡೆಯುತ್ತೇನೆ ಎನ್ನುತ್ತ ನಾಲಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಮೋದಿ ಗೆದ್ದಿರೋದು 2024ರಲ್ಲಿ ಅಲ್ಲ, ಮೈತ್ರಿ ಮುರಿದ ಬಳಿಕ ಸಿಎಂ ನಿತೀಶ್ ವಾಗ್ದಾಳಿ

ನವೆಂಬರ್-ಡಿಸೆಂಬರ್ ವೇಳೆಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ ಮಾಡುತ್ತೇವೆ ಎಂದು ಕಾರ್ಯನಿರ್ವಾಹಕ ಎಇಇ ಹೇಳುತ್ತಿದ್ದಂತೆ ಏಕಾಏಕಿ ನಾಲಗೆ ಹರಿ ಬಿಟ್ಟ ಉಮೇಶ್ ಕತ್ತಿ, ನಾನು ಮಾರ್ಚ್ ತಿಂಗಳೊಳಗೆ ಕಾಮಗಾರಿ ಮುಗಿಸಿ ಎಂದಿದ್ದೇನೆ. ಡಿಸೆಂಬರ್‌ಗೆ ಕಾಮಗಾರಿ ಪೂರ್ಣವಾದರೆ ನಾನೇ ಬಂದು ಹೂ ಮಾಲೆ ಹಾಕುತ್ತೇನೆ. ಇಲ್ಲದೇ ಹೋದರೆ ಬೂಟಿನಿಂದಲೇ ಹೊಡೆಯುತ್ತೇನೆ, ಈ ರೀತಿ ಕಾಂಪ್ರಮೈಸ್ ಇದೆ ಎಂದು ಕತ್ತಿ ಮಾತನಾಡಿದ್ದಾರೆ. ಇದನ್ನೂ ಓದಿ: ಊಟ ಬೇಕಂದ್ರೆ ಕೇಳಿ ಹಾಕಿಸ್ಕೋತಿನಿ ಬಿಡು ಗುರು – ನಟ ಕೋಮಲ್ ಶೈಲಿ ಕಾಪಿ ಹೊಡೆದ್ರಾ ಶಿಖರ್ ಧವನ್?

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *