ಅಹಂಕಾರದಿಂದ ಕುರುಡಾಗಿರುವ ಸರ್ಕಾರಕ್ಕೆ ಹಣದುಬ್ಬರ ಎಲ್ಲಿ ಕಾಣಿಸುತ್ತದೆ: ರಾಹುಲ್ ಕಿಡಿ

Public TV
1 Min Read

ನವದೆಹಲಿ: ಅಹಂಕಾರದಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ದೇಶದ ಆಸ್ತಿಯನ್ನು ತಮ್ಮ ಸ್ನೇಹಿತರಿಗೆ ಮುಕ್ತ ನಿಧಿಯಾಗಿ ಮಾರಾಟ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ದೇಶದ ಹಣದುಬ್ಬರ ಕಾಣಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆಯಲ್ಲಿ ನಡೆದ ಬೆಲೆ ಏರಿಕೆ ಕುರಿತ ಚರ್ಚೆಯ ಬಳಿಕ ಟ್ವೀಟ್ ಮಾಡಿದ ರಾಹುಲ್ ಗಾಂಧಿ, ಅವರಿಗೆ ಹಣದುಬ್ಬರ ಕಾಣಿಸಲು ಹೇಗೆ ಸಾಧ್ಯ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಮಂಕಿಪಾಕ್ಸ್ ಬಗ್ಗೆ ಆತಂಕ ಬೇಡ, ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿಗಾ: ಸುಧಾಕರ್

ಬಿಜೆಪಿ ಸರ್ಕಾರ ದೇಶದಲ್ಲಿ ಹಣದುಬ್ಬರ ಇಲ್ಲ ಎಂದು ಸಂಸತ್ತಿನಲ್ಲಿ ಹೇಳಿದೆ. ಅವರು ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಾರೆ. ಇದರಿಂದ ಅವರಿಗೆ ಹಣದುಬ್ಬರ ಹೇಗೆ ಕಾಣಿಸಲು ಸಾಧ್ಯ? ಅಹಂಕಾರದಿಂದ ಕೂಡಿದ ಸರ್ಕರ ದೇಶದ ಆಸ್ತಿಯನ್ನು ತಮ್ಮ ಸ್ನೇಹಿತರಿಗೆ ಫ್ರೀ ಫಂಡ್‌ನಲ್ಲಿ ಮಾರಾಟ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಲಾನ್‌ ಬಾಲ್ಸ್‌ನಲ್ಲಿ ಇತಿಹಾಸ ಸೃಷ್ಟಿ – ಚಿನ್ನ ಗೆದ್ದ ವನಿತೆಯರು

ಇದರೊಂದಿಗೆ ರಾಹುಲ್ ಗಾಂಧಿ 2019 ಹಾಗೂ ಈಗ ಇರುವ ಪೆಟ್ರೋಲ್, ಡೀಸೆಲ್ ಮತ್ತು ಇತರ ಸರಕುಗಳ ಬೆಲೆಗಳನ್ನು ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *