ಕುಮಾರಸ್ವಾಮಿ ಹೊಸ ಹೀರೋಯಿನ್: ಸಿಎಂ ಇಬ್ರಾಹಿಂ

Public TV
1 Min Read

ಬೆಂಗಳೂರು: ಪಂಡರೀಬಾಯಿ ತರಹ ಹಳೆ ಹೀರೋಯಿನ್‍ಗಳಿಗೆ ಅವಕಾಶ ಕೊಟ್ಟಿದ್ದು ಸಾಕು. ಕುಮಾರಸ್ವಾಮಿ ಹೊಸ ಹಿರೋಯಿನ್. ಹೀಗಾಗಿ ಅವರಿಗೆ ಒಂದು ಬಾರಿ ಅವಕಾಶ ಕೊಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಸಿದ್ದರಾಮೋತ್ಸವ ಕಾರ್ಯಕ್ರಮ ವಿಚಾರ ಸಂಬಂಧ ಪ್ರತಕ್ರಿಯಿಸಿ, ಸಿದ್ದರಾಮೋತ್ಸವ ಮಾಡ್ತಾರೆ, ಡಿಕೆ ಶಿವಕುಮಾರ್ ಉತ್ಸವ ಮಾಡ್ತಿದ್ದಾರೆ. ನಾವು ಜನರ ಉತ್ಸವ, ನೀರಾವರಿ ಉತ್ಸವ ಮಾಡ್ತಿದ್ದೇವೆ ಎಂದರು. ಇದನ್ನೂ ಓದಿ: ನಮ್ಮದು ಘರ್ಜಿಸುವ ಸಿಂಹ, ಕಾಂಗ್ರೆಸ್‍ನದ್ದು ಮಲಗಿದ ಸಿಂಹ: ಬೊಮ್ಮಾಯಿ

ಕಾಂಗ್ರೆಸ್ ಗೆ ಅಧಿಕಾರದ ಚಿಂತೆ. ಜೆಡಿಎಸ್‍ಗೆ ಜನರ ಬಗ್ಗೆ ಮಾತ್ರ ಚಿಂತೆ. ಪಂಡರೀಬಾಯಿ ತರಹ ಹಳೆ ಹಿರೋಯಿನ್ ಗಳಿಗೆ ಅವಕಾಶ ಕೊಟ್ಟಿದ್ದು ಸಾಕು. ಕುಮಾರಸ್ವಾಮಿ ಹೊಸ ಹಿರೋಯಿನ್. ಕುಮಾರಸ್ವಾಮಿ ಒಂದು ಬಾರಿ ಅವಕಾಶ ಕೊಡಿ. 123 ಮಿಷನ್ ಗೆ ಸಹಕಾರ ಕೊಡಿ. ಕುಮಾರಸ್ವಾಮಿ 2023ಕ್ಕೆ ಸಿಎಂ ಆಗ್ತಾರೆ. ಕಾಂಗ್ರೆಸ್ ಮೂರನೇ ಸ್ಥಾನ, ಬಿಜೆಪಿ ಎರಡನೇ ಸ್ಥಾನ, ಜೆಡಿಎಸ್ ಮೊದಲ ಸ್ಥಾನಕ್ಕೆ ಬರಲಿದೆ ಎಂದು ಹೇಳಿದರು.

ಕೋಲಾರ, ಚಿಕ್ಕಬಳ್ಳಾಪುರ ಹಲವು ಮುಖಂಡರು ಜೆಡಿಎಸ್ ಸೇರ್ಪಡೆ ಆಗ್ತಿದ್ದಾರೆ. ಕೆಎಚ್ ಮುನಿಯಪ್ಪ ಬಲಗೈ ಬಂಟ ಇವತ್ತು ಜೆಡಿಎಸ್ ಸೇರ್ಪಡೆ ಆಗ್ತಿದ್ದಾರೆ. ಕೋಲಾರ ಕಾಂಗ್ರೆಸ್ ಮತ್ತು ಬಿಜೆಪಿ ಮುಕ್ತ ಮಾಡುವ ಕೆಲಸ ಮಾಡ್ತಿದ್ದೇವೆ. ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಮುಕ್ತ ಮಾಡುವ ಕಾರ್ಯದಲ್ಲಿ ಇದು ಮೊದಲ ಹೆಜ್ಜೆ. ಮುನಿಯಪ್ಪ ಬಲಗೈ ಬಂಟರೇ ಬಂದ ಮೇಲೆ ಮುಂದೆ ಏನಾಗುತ್ತೆ ಅಂತ ಗೊತ್ತಾಗುತ್ತದೆ. ಆಷಾಢ ಬಳಿಕ ಎಲ್ಲಾ ಗೊತ್ತಾಗಲಿದೆ ಎಂದು ತಿಳಿಸಿದರು.

ಶಾಲೆಗಳು ಪ್ರಾರಂಭ ಆಗಿವೆ. ಶೂ ಮತ್ತು ಸಾಕ್ಸ್ ಕೂಡಲೇ ಕೊಡಬೇಕು. ಸಿಎಂ ಕೂಡಲೇ ಶೂ, ಸಾಕ್ಸ್ ವಿತರಣೆ ಆಗಬೇಕು. ಇಲ್ಲದೆ ಹೋದರೆ ಜೆಡಿಎಸ್ ಬೀದಿಗೆ ಇಳಿದು ಪ್ರತಿಭಟನೆ ಮಾಡ್ತೀವಿ ಎಂದು ಸಿಎಂ ಇಬ್ರಾಹಿಂ ಎಚ್ಚರಿಕೆ ನೀಡಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *