ದೇಶದ ಜನರನ್ನು ಲೂಟಿ ಮಾಡಲು ನೆರವಾಗುವಂತೆ ಸಂವಿಧಾನವನ್ನು ಬರೆಯಲಾಗಿದೆ: ಸಾಜಿ ಚೆರಿಯನ್

Public TV
1 Min Read

ತಿರುವನಂತಪುರಂ: ಭಾರತವು ಸುಂದರವಾಗಿ ಬರೆದ ಸಂವಿಧಾನವನ್ನು ಹೊಂದಿದೆ ಎಂದು ನಾವೆಲ್ಲರೂ ಹೇಳುತ್ತೇವೆ. ಆದರೆ ಸಂವಿಧಾನವನ್ನು ದೇಶದ ಹೆಚ್ಚಿನ ಜನರನ್ನು ಲೂಟಿ ಮಾಡಲು ನೆರವಾಗುವಂತೆ ಬರೆಯಲಾಗಿದೆ ಎಂದು ನಾನು ಹೇಳುತ್ತೇನೆ ಎಂದು ಕೇರಳದ ಮೀನುಗಾರಿಕೆ ಮತ್ತು ಸಾಂಸ್ಕೃತಿಕ ಸಚಿವ ಸಾಜಿ ಚೆರಿಯನ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಸಂವಿಧಾನದ ಬಗ್ಗೆ ಸಜಿ ಚೆರಿಯನ್ ಅವರ ಹೇಳಿಕೆಯು ವಿವಾದಕ್ಕೆ ಕಾರಣವಾಗಿದ್ದು, ಭಾರತವು ಸುಂದರವಾಗಿ ಬರೆದ ಸಂವಿಧಾನವನ್ನು ಹೊಂದಿದೆ ಎಂದು ನಾವೆಲ್ಲರೂ ಹೇಳುತ್ತೇವೆ. ಆದರೆ ಸಂವಿಧಾನವನ್ನು ಭಾರತದ ಹೆಚ್ಚಿನ ಜನರ ಸಂಪತ್ತನ್ನು ಕಸಿದುಕೊಳ್ಳಲು ಸಹಾಯ ಮಾಡುತ್ತದೆ ಎಂದು ನಾನು ಹೇಳುತ್ತೇನೆ. ಬ್ರಿಟಿಷರು ಬರೆದಿದ್ದ ಸಂವಿಧಾನವನ್ನು ನೋಡಿ ನಮ್ಮ ಭಾರತೀಯ ನಮ್ಮ ಸಂವಿಧಾನವನ್ನು ಸಿದ್ಧಪಡಿಸಿದ್ದು, ಅದನ್ನು ನಾವು ಈ ದೇಶದಲ್ಲಿ 75 ವರ್ಷಗಳಿಂದ ಆಚರಣೆ ಮಾಡುತ್ತಿದ್ದೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಗಳನ್ನು ಸಾಕಿ, ವಿದ್ಯಾಭ್ಯಾಸ ಮಾಡಿಸಲು ಸಾಧ್ಯವಿಲ್ಲವೆಂದು ಬರ್ಬರವಾಗಿ ಹತ್ಯೆ – ತಂದೆಗೆ ಜೀವಾವಧಿ ಶಿಕ್ಷೆ 

ಭಾರತದಲ್ಲಿ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲಾಗಿಲ್ಲ ಎಂದು ಒತ್ತಿ ಹೇಳಿದ ಅವರು, ಸಂವಿಧಾನದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತತೆಯಂತಹ ಕೆಲವು ಉತ್ತಮ ಅಂಶಗಳ ಕುರುಹುಗಳು ಇದ್ದರೂ, ಅದರ ಉದ್ದೇಶ ಸಾಮಾನ್ಯ ಜನರನ್ನು ಶೋಷಣೆ ಮಾಡುತ್ತಿದೆ. ಭಾರತವು ಕಾರ್ಮಿಕ ಪ್ರತಿಭಟನೆಯನ್ನು ಒಪ್ಪಿಕೊಳ್ಳದ ದೇಶವಾಗಿದೆ. ಯಾರಾದರೂ ವೇತನವನ್ನು ಕೇಳಿದರೆ ಅವರನ್ನು ಹೊಡೆಯಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಡವ ತನ್ನ ದುಡಿಮೆಯಿಂದ ಪಡೆದ ಹೆಚ್ಚುವರಿ ಮೌಲ್ಯವನ್ನು ಬಳಸಿಕೊಂಡು ಶೋಷಣೆಗೆ ಒಳಗಾಗುತ್ತಾನೆ. ಈ ದೇಶದ ಸಂವಿಧಾನವು ಕಾರ್ಮಿಕರು 8-20 ಗಂಟೆಗಳವರೆಗೆ ಕೆಲಸ ಮಾಡುವಾಗ ಅವರನ್ನು ರಕ್ಷಿಸುತ್ತಿದೆಯೇ ಎಂದು ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *