ಕಂಗನಾ ರಣಾವತ್ ವಿರುದ್ಧ ತಿರುಗಿ ಬಿದ್ದ ಠಾಕ್ರೆ ಅಭಿಮಾನಿಗಳು

Public TV
1 Min Read

ಬಾಲಿವುಡ್ ನಟಿ ಕಂಗನಾ ರಣಾವತ್ ಈ ಹಿಂದೆ ಮಹಾರಾಷ್ಟ್ರದ ಸಿಎಂ ಉದ್ಭವ ಠಾಕ್ರೆ ವಿರುದ್ಧ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಸ್ತ್ರೀಯರಿಗೆ ಅಪಮಾನ ಯಾರು ಮಾಡುತ್ತಾರೋ ಅವರ ಪತನ ನಿಶ್ಚಿತ ಎಂದು ಹೇಳಿದ್ದ ವಿಡಿಯೋ, ಪ್ರಸ್ತುತ ಮಹಾರಾಷ್ಟ್ರದ ಸಿಎಂ ಉದ್ಭವ ಠಾಕ್ರೆ ಅವರಿಗೆ ಅನ್ವಯಿಸುತ್ತಿದೆ ಎಂದು ಬಣ್ಣಿಸಲಾಗುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಠಾಕ್ರೆ ಅಭಿಮಾನಿಗಳು ಕಂಗನಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಕಂಗನಾ ರಣಾವತ್ ನಟಿಸಿದ್ದ ಧಾಕಡ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದೆ. ನಿರ್ಮಾಪಕರಿಗೆ ಐವತ್ತು ಕೋಟಿಗೂ ಅಧಿಕ ನಷ್ಟವನ್ನುಂಟು ಮಾಡಿದೆ. ಯಾರಿಗೆ ನಟನೆ ಬರುವುದಿಲ್ಲವೋ ಅವರಿಗೆ ಸೋಲು ನಿಶ್ಚಿತ ಎನ್ನುವ ಅರ್ಥದಲ್ಲಿ ಠಾಕ್ರೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕಂಗನಾಗೆ ನಟಿಸುವುದು ಮಾತ್ರ ಗೊತ್ತು, ಅವರಿಗೆ ರಾಜಕೀಯ ಗಂಧಗಾಳಿ ಗೊತ್ತಿಲ್ಲ. ಅವರು ಕಾಸಿಗಾಗಿ ನಟಿಸಿದರೆ ಉತ್ತಮ ಎಂದು ಠಾಕ್ರೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಐದು ಭಾಷೆ, ಐದು ಸ್ಟಾರ್ ನಟರಿಂದ ಕಿಚ್ಚನ ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್

ಈ ಹಿಂದೆ ಕಂಗನಾ ರಣಾವತ್ ಮತ್ತು ಉದ್ಭವ್ ಠಾಕ್ರೆ ಸರಕಾರದ ನಡುವೆ ಜಟಾಪಟೆ ನಡೆದಿತ್ತು. ಕಂಗನಾಗೆ ಮಹಾರಾಷ್ಟ್ರದಲ್ಲಿ ನೆಲೆಯೂರಲು ಏನಿಲ್ಲದ ತೊಂದರೆ ಮಾಡಿತ್ತು. ಕಂಗನಾ ಆಫೀಸು ಸೇರಿದಂತೆ ನಾನಾ ಕಡೆ ಅಧಿಕಾರಿಗಳನ್ನು ಬಿಟ್ಟು, ಕಿರುಕುಳ ನೀಡಿದ್ದರು. ಈ ಸಂದರ್ಭದಲ್ಲಿ ಕಂಗನಾ ವಿಡಿಯೋವೊಂದನ್ನು ಮಾಡಿ ಸ್ತ್ರೀಯರಿಗೆ ತೊಂದರೆ ಕೊಟ್ಟವರಿಗೆ ಪತನ ನಿಶ್ಚಿತ ಎಂದು ಭವಿಷ್ಯ ನುಡಿದಿದ್ದರು. ಸದ್ಯ ಅದು ನಿಜವಾಗುತ್ತಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *