ರಾಜಧಾನಿಯಲ್ಲಿ ಆಕ್ಟೀವ್ ಆದ ಗಡಾರಿ ಗ್ಯಾಂಗ್!

Public TV
1 Min Read

ಬೆಂಗಳೂರು: ನೆಲಮಂಗಲದ ಗ್ರಾಮಾಂತರ ಪ್ರದೇಶಗಳಲ್ಲಿ ಗ್ಯಾಂಗ್‍ವೊಂದು ಸಣ್ಣದೊಂದು ಗಡಾರಿ ಮೂಲಕ ಯಾರಿಗೂ ಸಂಶಯಬಾರದಂತೆ ಅಂಗಡಿಗಳ ಶೆಟರ್ ಓಪನ್ ಮಾಡಿ ಕಳ್ಳತನ ಮಾಡಿದೆ.

ನೆಲಮಂಗಲ ತಾಲೂಕಿನ ಬೂದಿಹಾಲ್ ಗ್ರಾಮದ ಸೋಮಣ್ಣ ಎಂಬುವವರ ಬೈಲಾಂಜನೇಯ ಪ್ರಾವಿಷನ್ ಸ್ಟೋರ್ ಶಟರ್ ಮುರಿದು, ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಇನ್ನೂ ಮಧ್ಯರಾತ್ರಿ ಕಾರ್ಯಾಚರಣೆ ನಡೆಸುವ ಮೂವರು ಕಳ್ಳರು ಸಿಸಿ ಕ್ಯಾಮೆರಾ ನೋಡಿಕೊಂಡು ಯಾವುದೇ ಭಯವಿಲ್ಲದೆ ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಹಿಜಬ್ ಹೈಡ್ರಾಮಾ – ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಆರು ಯುವಕರು ವಶ

ಪ್ರಾವಿಷನ್ ಸ್ಟೊರ್‍ನಲ್ಲಿದ್ದ ಹಣ, ತಂಬಾಕು ಉತ್ಪನ್ನ ಹಾಗೂ ಮೊಬೈಲ್ ದೋಚಿ ಕಳ್ಳರು ಪರಾರಿಯಾಗಿದ್ದರೆ. ಕಳ್ಳರ ಕರಾಮತ್ತಿನಿಂದ ಜನರು ಆತಂಕಕ್ಕೆ ಒಳಗಾಗಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *