ಬಿಲ್ ಕೊಡಿ ಅಂದಿದ್ದಕ್ಕೆ ಬಾರ್ ಮಾಲೀಕನ ಹೆಬ್ಬೆರಳನ್ನೇ ಕಚ್ಚಿದ!

Public TV
1 Min Read

ಲಕ್ನೋ: ಬಿಲ್ ಪಾವತಿಸಲು ಹೇಳಿದ್ದಕ್ಕೆ ಬಾರ್ ಮಾಲೀಕನ ಕೈ ಹೆಬ್ಬೆರಳು ಕಚ್ಚಿದ ವಿಚಿತ್ರ ಘಟನೆಯೊಂದು ಮುಜಫ್ಪರ್ ನಗರದಲ್ಲಿ ನಡೆದಿದೆ.

ಒಂದು ದಿನ ಸುನೀಲ್ ಕುಮಾರ್ ತನ್ನ ಗೆಳಯನೊಂದಿಗೆ ಬಾರ್‍ಗೆ ಹೋಗಿದ್ದಾನೆ. ಕಂಠಪೂರ್ತಿ ಕುಡಿದಿದ್ದಾರೆ. ಬಿಲ್ ಪಾವತಿ ಮಾಡಲು ಮಾಲೀಕ ತಿಳಿಸಿದಾಗ ಖ್ಯಾತೆ ತೆಗೆದಿದ್ದಾರೆ. ಬಿಲ್ ಪಾವತಿ ಮಾಡುವ ವಿಚಾರದಲ್ಲಿ ಬಾರ್ ಮಾಲೀಕ ಅಶೋಕ್ ಕುಮಾರ್ ಜೊತೆಗೆ ಜಗಳ ಆರಂಭಿಸಿದ್ದಾನೆ. ಈ ಜಗಳ ವಿಕೋಪಕ್ಕೆ ಹೋಗಿದೆ.  ಇದನ್ನೂ ಓದಿ: ನವೋದಯದಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯಬೇಡಿ – ಕೊಡಗಿನ ಪೋಷಕರಿಂದ ವಿರೋಧ

ಸಿಟ್ಟಿಗೆದ್ದ ಸುನೀಲ್ ಬಾರ್ ಮಾಲೀಕನ ಹೆಬ್ಬೆರಳನ್ನೇ ಕಚ್ಚಿದ್ದಾನೆ. ಸುನೀಲ್ ಕುಮಾರ್ ಹಾಗೂ ಅವನ ಗೆಳೆಯನನ್ನು ಬಂಧಿಸಲಾಗಿದೆ. ಬಾರ್ ಮಾಲೀಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತನಿಖೆ ಮಾಡುತ್ತೇವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಇದನ್ನೂ ಓದಿ: ನಿಶ್ಚಿತಾರ್ಥ ಸಮಾರಂಭಕ್ಕೆ ನುಗ್ಗಿ ಯುವಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

Share This Article
Leave a Comment

Leave a Reply

Your email address will not be published. Required fields are marked *