ಅಂದು ಡಿಕೆಶಿ ನೀನು ಸಭೆ ಮಾಡಬೇಡ, ಇಂದು ಇಬ್ಬರು ಸೇರಿ ಸಭೆ ಮಾಡೋಣ ಬಾ

Public TV
1 Min Read

ಬೆಂಗಳೂರು: ಏ ಡಿಕೆ ನನ್ನ ಜಿಲ್ಲೆಯಲ್ಲಿ ನಾನಿಲ್ಲದಾಗ ಸಭೆ ಮಾಡಬೇಡ ಎಂದು ಹೇಳಿದ್ದ ಸಿದ್ದರಾಮಯ್ಯ ಈಗ ಡಿ.ಕೆ.ಶಿವಕುಮಾರ್ ಜೊತೆಗೂಡಿ ಮೇಕೆದಾಟು ಪಾದಯಾತ್ರೆ ಪೂರ್ವಭಾವಿ ಸಭೆ ನಡೆಸಲು ಮುಂದಾಗಿದ್ದಾರೆ.

ಹೌದು. ಬೆಳಗಾವಿಯಲ್ಲಿ ಅದಿವೇಶನ ನಡೆಯುತ್ತಿದ್ದಾಗ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ವಾರ್ನ್ ಮಾಡಿ ಸಿದ್ದರಾಮಯ್ಯ ಸಭೆ ನಿಲ್ಲಿಸಿದ್ದರು. ಆದರೆ ಈಗ ಸಿದ್ದರಾಮಯ್ಯರಿಂದ ಭಾನುವಾರ ಹಾಗೂ ಸೋಮವಾರ ಮೇಕೆ ದಾಟು ಪಾದಯಾತ್ರೆ ಸಭೆ ನಡೆಯಲಿದೆ. ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ – ಕರ್ನಾಟಕದಿಂದ 1007.18 ಕೋಟಿ ರೂ. ಬಿಡುಗಡೆ

ಭಾನುವಾರ ಚಾಮರಾಜನಗರದಲ್ಲಿ ಹಾಗೂ ಸೋಮವಾರ ಮೈಸೂರಿನಲ್ಲಿ ಮೇಕೆದಾಟು ಸಂಬಂಧ ಸಭೆ ನಡೆಸಲಿರುವ ಸಿದ್ದರಾಮಯ್ಯ ಜೊತೆಗೆ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದರೆ.

ಬೆಳಗಾವಿ ಅದಿವೇಶನದ ಸಂದರ್ಭದಲ್ಲಿ ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ನಾಯಕರ ಸಭೆ ನಡೆಸಲು ಡಿಕೆಶಿ ಮುಂದಾಗಿದ್ದರು. ನಾನಿಲ್ಲದಾಗ ನನ್ನ ಜಿಲ್ಲೆಯಲ್ಲಿ ಸಭೆ ನಡೆಸಬಾರದು ಎಂದು ಸುವರ್ಣ ಸೌಧದ ಲಾಂಜ್‍ನಲ್ಲೇ ಡಿಕೆಶಿಗೆ ಸಿದ್ದರಾಮಯ್ಯ ವಾರ್ನ್ ಮಾಡಿದ್ದರು. ಸಿದ್ದರಾಮಯ್ಯ ಮಾತಿಗೆ ಸಭೆ ನಡೆಸದೇ ಡಿಕೆಶಿ ಸೈಲೆಂಟಾಗಿದ್ದರು. ಇದನ್ನೂ ಓದಿ: ಸಚಿವರಲ್ಲಿ ಯಾರು ಪಾಸ್? ಫೇಲ್?: ಎಕ್ಸಾಂ ನಡೆಸಲು ಬರ್ತಾರಂತೆ ಅಮಿತ್ ಶಾ

Share This Article
Leave a Comment

Leave a Reply

Your email address will not be published. Required fields are marked *