ಏಡ್ಸ್ ರೋಗಿಗಳಿಗೆ ಸಕಾಲಕ್ಕೆ ಸಿಗ್ತಿಲ್ಲ ಚಿಕಿತ್ಸೆ – ಪ್ರಾಣಾಪಾಯದಲ್ಲಿ 300ಕ್ಕೂ ಅಧಿಕ ಸೋಂಕಿತರು

Public TV
1 Min Read

ಯಾದಗಿರಿ: ಜಿಲ್ಲೆಯ ಏಡ್ಸ್ ರೋಗಿಗಳಿಗೆ ಕಳೆದ ಒಂದು ತಿಂಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡಿದ ಕಾರಣ 300 ಕ್ಕೂ ಅಧಿಕ ಹೆಚ್‍ಐವಿ ಸೋಂಕಿತರು ಪರದಾಡುವಂತಾಗಿದೆ.

Yadagiri hospital

ಜಿಲ್ಲೆಯ ಏಡ್ಸ್ ರೋಗಿಗಳ ಸಮಸ್ಯೆಗೆ ವೈದ್ಯರು ಸರಿಯಾಗಿ ಸ್ಪಂದಿಸದ ಕಾರಣ ಬೇರೆ, ಬೇರೆ ತಾಲೂಕಿನಿಂದ ನಿತ್ಯ ಬಂದು ವಾಪಸು ಹೋಗುತ್ತಿದ್ದಾರೆ ಹೆಚ್‍ಐವಿ ಸೋಂಕಿತರು. ಸೋಂಕಿತರಿಗೆ ಬ್ಲಡ್ ಟೆಸ್ಟ್ ಮಾಡುತ್ತಿಲ್ಲ. ಬ್ಲಡ್ ಟೆಸ್ಟ್ ಮಾಡದೇ ಮಾತ್ರೆಗಳನ್ನು ನುಂಗುವಂತಿಲ್ಲ. ಇದನ್ನೂ ಓದಿ: ಸೊಸೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಲವಂತವಾಗಿ ಕೋಳಿ ರಕ್ತ ಕುಡಿಸಿದ ಮಾವ!

Yadagiri hospital

ಹೀಗಿದ್ದರೂ ಜಿಲ್ಲಾಸ್ಪತ್ರೆಯ ವೈದ್ಯ ಅಧಿಕಾರಿ ಸಂಜೀವ್ ರಾಯಚೂರಕರ್ ರೋಗಿಗಳಿಗೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ನಿತ್ಯ ಆಸ್ಪತ್ರೆಗೆ ಬಂದು ಹೋಗುತ್ತಿರುವುದಕ್ಕೆ ಸೋಂಕಿತರು ಮುಜುಗರ ಅನುಭವಿಸುವಂತಾಗಿದೆ. ಇನ್ನೂ ಇದು ಹೀಗೆ ಮುಂದುವರಿದರೆ ಸೋಂಕಿತರಿಗೆ ಪ್ರಾಣಾಪಾಯವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ದೆಹಲಿ ಜನ್ರಿಗೆ ಗುಡ್ ನ್ಯೂಸ್ – ಅ.1ರಿಂದ ಕಾರ್ಯನಿರ್ವಹಿಸಲಿರುವ ಹೊಂಜು ಗೋಪುರ

Share This Article
Leave a Comment

Leave a Reply

Your email address will not be published. Required fields are marked *