ಹಾಡಹಗಲೇ ಮನೆ ಕಳ್ಳತನಕ್ಕೆ ಯತ್ನ-ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಖದೀಮರ ಕೃತ್ಯ

Public TV
1 Min Read

ಶಿವಮೊಗ್ಗ: ಹಾಡಹಗಲೇ ಮನೆ ಕಳ್ಳತನಕ್ಕೆ ಯತ್ನಿಸಿದ ಘಟನೆ ನಗರದ ಕುವೆಂಪು ನಗರದಲ್ಲಿ ಕಳೆದ ಎರಡು ದಿನದ ಹಿಂದೆ ನಡೆದಿದ್ದು, ಕಳ್ಳರು ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕುವೆಂಪು ನಗರದ ಮನೆಯೊಂದರಲ್ಲಿ ಮೂವರು ಖದೀಮರ ತಂಡವೊಂದು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ್ದಾರೆ. ಮನೆಯ ಗೇಟ್ ತೆಗೆದುಕೊಂಡು ಒಳಗೆ ಪ್ರವೇಶಿಸಿ ಬಾಗಿಲು ತೆಗೆಯಲು ಯತ್ನಿಸಿದ್ದಾರೆ. ಆದರೆ ಬಾಗಿಲು ತೆಗೆಯಲು ಸಾಧ್ಯವಾಗದ ಕಾರಣ, ಹಗಲು ಹೊತ್ತು ಆಗಿದ್ದರಿಂದ ವಿಫಲ ಯತ್ನ ನಡೆಸಿ ವಾಪಸ್ ತೆರಳಿದ್ದಾರೆ. ಇದನ್ನೂ ಓದಿ: ಅಡಿಕೆಗೆ ಬಂಪರ್ ಬೆಲೆ- ತೋಟದಲ್ಲಿಯೇ ಕಳ್ಳತನವಾಗುತ್ತಿದೆ ಅಡಿಕೆ

ಮನೆಯ ಮಾಲೀಕರು ಮನೆಗೆ ವಾಪಾಸ್ ಬಂದ ನಂತರ ಸಿಸಿ ಕ್ಯಾಮರಾ ಪರಿಶೀಲಿಸಿದ ನಂತರ ಕಳ್ಳರು ಹೊಂಚು ಹಾಕಿದ ದೃಶ್ಯ ಬಹಿರಂಗವಾಗಿದೆ. ಈ ವಿಷಯ ಹೊರಗೆ ಬರುತ್ತಿದ್ದಂತೆ ಕುವೆಂಪು ನಗರ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಹಗಲು ಸಮಯದಲ್ಲಿಯೇ ಈ ರೀತಿ ಆದರೆ ಇನ್ನು ರಾತ್ರಿಯ ಸಮಯದಲ್ಲಿ ಹೇಗೆ ಎಂಬ ಭಯಭೀತಿಗೊಂಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಕಳೆದ ಆರು ತಿಂಗಳಲ್ಲಿ ಹಗಲಿನಲ್ಲಿಯೇ ಹಲವು ಕಳ್ಳತನ ಪ್ರಕರಣ ನಡೆದಿರುವ ಘಟನೆ ವರದಿಯಾಗಿವೆ. ಇಂತಹ ಬಡಾವಣೆಗಳಲ್ಲಿ ಪೊಲೀಸರು ಹೆಚ್ಚು ಗಸ್ತು ತಿರುಗುವಂತೆ ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *