ವೈಷ್ಣವಿ ಮನೆಯಲ್ಲಿ ಎಲ್ಲರೂ ರೇಷ್ಮೆನಾ?- ಅಣ್ಣ, ಅತ್ತಿಗೆ ಹೇಳಿದ್ದೇನು?

Public TV
2 Min Read

ಅಂತೂ ಇಂತು ಬಿಗ್ ಬಾಸ್ ಮನೆ ಇಂದಿಗೆ ಕ್ಲೋಸ್ ಆಗುತ್ತಿದ್ದು, ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದೆ. ಇದೇ ವೇಳೆ ಬಿಗ್ ಬಾಸ್ ಸೀಸನ್ 8ರ ಟಾಪ್ 4 ಕಂಟೆಸ್ಟ್ ಆಗಿ ಎಲಿಮಿನೇಟ್ ಆಗಿರುವ ವೈಷ್ಣವಿ ಗೌಡ ಕಿಚ್ಚ ಸುದೀಪ್ ಜೊತೆ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ವೈಷ್ಣವಿ ಮಾತನಾಡುವಾಗಲೇ ಕಿಚ್ಚ ಸುದೀಪ್ ರೇಷ್ಮೆ ಟಾಪಿಕ್ ತೆಗೆದಿದ್ದಾರೆ. ವೈಷ್ಣವಿ ಅವರೆ ಎಷ್ಟು ವರ್ಷದಿಂದ ಈ ಕಣ್ಣಿಗೆ ಕಾಣದ ರೇಷ್ಮೆ ಸೀರೆಯನ್ನು ಎತ್ಕೊಂಡು ಓಡಾಡುತ್ತಿದ್ದೀರಿ ತಾವು ಎಂದು ಸುದೀಪ್ ಕೇಳಿದ್ದಾರೆ. ಆಗ ಉತ್ತರಿಸಿದ ವೈಷ್ಣವಿ ನಿಜ ಹೇಳಬೇಕೆಂದರೆ ನನಗೆ ಆ ರೀತಿ ಮಾತನಾಡಲು ತುಂಬಾ ಖುಷಿ ಆಗುತ್ತದೆ. ಆದರೆ ಆ ರೀತಿ ಮಾತನಾಡಿದರೆ ಯಾರಿಗೂ ಅರ್ಥ ಆಗಲ್ಲ, ಕನೆಕ್ಟ್ ಆಗಲ್ಲ. ಆದರೆ ನಾನು ಮಾತ್ರ ಒಳಗೊಳಗೇ ಎಂಜಾಯ್ ಮಾಡುತ್ತಿರುತ್ತೇನೆ ಎಂದಿದ್ದಾರೆ.

ಎಷ್ಟು ವರ್ಷದಿಂದ ಈ ರೀತಿ ಎಂದು ಮತ್ತೆ ಸುದೀಪ್ ಕೇಳಿದ್ದು, ಆರೇಳು ವರ್ಷದಿಂದ ಇದು ಆರಂಭವಾಗಿದೆ ಎಂದಿದ್ದಾರೆ. ಬಳಿಕ ಇದು ವಂಶವಾಹವೇ, ಡಿಎನ್‍ಎ ವಿಷಯವೇ ಅಥವಾ ನಿಮ್ಮಿಂದ ಆರಂಭವಾಗುತ್ತಿದೆಯೆ ಮನೆಯಲ್ಲಿ ಎಂದು ಕೇಳಿದ್ದಾರೆ. ಆಗ ನನ್ನಿಂದಿಲೇ ಆರಂಭವಾಗಿದೆ ಸರ್, ಮನೆಯಲ್ಲಿ ಎಲ್ಲರೂ ನೇರವಾಗಿ ಮಾತನಾಡುತ್ತಾರೆ. ಆ ತರ ರೇಷ್ಮೆ ಎಲ್ಲಾ ಇಲ್ಲ ಎಂದಿದ್ದಾರೆ.

ಬಳಿಕ ಕಿಚ್ಚ ಸುದೀಪ್ ವೈಷ್ಣವಿ ಅವರ ಅಣ್ಣನ ಬಳಿ ಕೇಳಿದ್ದು, ಇಲ್ಲ ಸರ್, ಈ ರೀತಿ ಮಾತನಾಡುವುದಿಲ್ಲ ಅವರು, ಏನೇ ಸಲಹೆ ಕೊಡುವುದಿದ್ದರೂ ನೇರವಾಗಿಯೇ ಕೊಡುತ್ತಾರೆ. ಎನೇ ತಪ್ಪು ಎದ್ದರೂ ಆಗಲೇ ಹೇಳುತ್ತಾರೆ ಎಂದಿದ್ದಾರೆ. ಅಲ್ಲದೆ ರೇಷ್ಮೆ ಎಂಬ ಹೆಸರನ್ನು ಎಷ್ಟು ಒಪ್ಪುತ್ತೀರಿ ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಆಗ ಅವರಿಗೆ ಶೇ.100ರಷ್ಟು ಒಪ್ಪುತ್ತದೆ. ಬಿಗ್ ಬಾಸ್ ಮನೆಯಲ್ಲಿ ಅವರು ಅದೇ ರೀತಿ ವರ್ತಿಸಿದ್ದಾರೆ. ಇದೂ ನಿಜವಾಗಿಯೂ ಒಳ್ಳೆಯದು ಎಂದು ನನಗೆ ಅನ್ನಿಸಿತು. ಅವರು ನಡೆದುಕೊಳ್ಳುವುದಕ್ಕೂ ಹೆಸರಿಗೂ ತುಂಬಾ ಮ್ಯಾಚ್ ಆಗುತ್ತಿದೆ ಎಂದಿದ್ದಾರೆ.

ವೈಷ್ಣವಿಗೆ ರೇಷ್ಮೆ ಹೆಸರು ಬಂದಿದ್ದು ಹೇಗೆ?
ಬಿಗ್ ಬಾಸ್ ಮನೆಯಲ್ಲಿದ್ದಾಗ ತುಂಬಾ ನಯವಾಗಿ, ಒಗಟಾಗಿ, ಪರೋಕ್ಷವಾಗಿ ಮಾತನಾಡುತ್ತಿದ್ದಕ್ಕೆ ಸುದೀಪ್ ಅವರು ವೈಷ್ಣವಿಗೆ ರೇಷ್ಮೆ ಎಂದು ಹೆಸರಿಟ್ಟಿದ್ದರು. ಅಲ್ಲಿಂದ ಪ್ರತಿ ವಾರ ವೀಕೆಂಡ್‍ನಲ್ಲಿ ರೇಷ್ಮೆ ಎಂದು ವೀಷ್ಣವಿಗೆ ಸುದೀಪ್ ರೇಗಿಸುತ್ತಿದ್ದರು. ರೇಷ್ಮೆ ಸೀರೆಯಲ್ಲಿ ಕಲ್ಲು ಕಟ್ಟಿ ಹೊಡೆಯುತ್ತೀರಿ ಎಂದು ಹೇಳುತ್ತಿದ್ದರು. ಹೀಗೆ ಈ ಹೆಸರು ಸೀಸನ್ ಮುಗಿಯುವವರೆಗೂ ಮುಂದುವರಿಯಿತು.

Share This Article
Leave a Comment

Leave a Reply

Your email address will not be published. Required fields are marked *