ಬೈಕ್ ಬಿಟ್ಟು ಬಿಡಿ – ಡಿವೈಎಸ್ಪಿ ಕಾಲಿಗೆ ಬಿದ್ದು ಮಹಿಳೆ ಕಣ್ಣೀರು

Public TV
1 Min Read

ಯಾದಗಿರಿ: ನಿಷೇಧವಿದ್ದರೂ ಊರು ಸುತ್ತಲು ನಗರಕ್ಕೆ ಬಂದು, ಪೊಲೀಸರ ಕೈಗೆ ಸಿಲುಕಿದ ಓರ್ವ ಮಹಿಳೆ ಡಿವೈಎಸ್ಪಿ ಕಾಲಿಗೆ ಬಿದ್ದು ಬೈಕ್ ಬಿಟ್ಟು ಬಿಡಿ ಅಂತ ಕಣ್ಣೀರು ಹಾಕಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ಸಂಪೂರ್ಣ ಲಾಕ್ ಡೌನ್ ಹಿನ್ನೆಲೆ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿಷೇಧವಿದೆ. ಹೀಗಿದ್ದರೂ ಜನ ಮಾತ್ರ ಕುಂಟು ನೆಪ ಹೇಳಿ ನಗರಕ್ಕೆ ಬರುತ್ತಿದ್ದಾರೆ. ಹೀಗಾಗಿ ಡಿವೈಎಸ್ಪಿ ಸಂತೋಷ್ ಬನ್ನಹಟ್ಟಿ ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದ ಬಳಿ ವಿಶೇಷ ರೈಡ್ ನಡೆಸಿ, ಎಂಟ್ರಿ ನೀಡುವ ವಾಹನಗಳನ್ನು ಸೀಜ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ತನ್ನ ಸಂಬಂಧಿ ಜೊತೆಗೆ ಬೈಕ್ ಮೇಲೆ ಬಂದ ಮಹಿಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಆಗ ಪೊಲೀಸರು ಮಹಿಳೆ ಜೊತೆಗೆ ಬಂದ ವ್ಯಕ್ತಿಯನ್ನು ಮತ್ತು ಬೈಕ್‍ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೋಲಿಸರ ಕೈಗೆ ಸಿಕ್ಕಬಿದ್ದ ಕೂಡಲೇ ನಾಟಕ ಮಾಡತೊಡಗಿದ ಮಹಿಳೆ ಡಿವೈಎಸ್ಪಿ ಸಂತೋಷ್ ಬನ್ನಹಟ್ಟಿ ಕಾಲಿಗೆ ಬಿದ್ದಿದ್ದಾಳೆ. ಇದರಿಂದಾಗಿ ಕೆಂಡಾಮಂಡಲವಾದ ಡಿವೈಎಸ್ಪಿ ಸಂತೋಷ್ ಮಹಿಳೆಗೆ ಬುದ್ಧಿ ಹೇಳಿ ರಸ್ತೆಪಕ್ಕದಲ್ಲಿ ನಿಲ್ಲುವಂತೆ ಹೇಳಿದರು. ಸದ್ಯ ಬೈಕ್ ಸೀಜ್ ಮಾಡಿ ಠಾಣೆಗೆ ತೆಗೆದುಕೊಂಡು ಹೋಗಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *