ಮಂಡ್ಯದಲ್ಲಿ ಬಸಪ್ಪನ ಪವಾಡಕ್ಕೆ ಮಾರುಹೋದ ಗ್ರಾಮಸ್ಥರು

Public TV
1 Min Read

ಮಂಡ್ಯ: ಒಬ್ಬ ಆರ್ಚಕನಾಗಬೇಕೆಂದರೆ ಆತನಿಗೆ ಮಂತ್ರ, ಸ್ತೋತ್ರ, ಶಾಸ್ತ್ರಗಳ ಬಗ್ಗೆ ಜ್ಞಾನವಿರಬೇಕು. ಆಚಾರ- ವಿಚಾರ ಆಚರಣೆ ಸಾಮಾನ್ಯವಾಗಿ ತಿಳಿದಿರಬೇಕು. ಅಲ್ಲದೆ ದೇವಸ್ಥಾನಕ್ಕೆ ಯಾರು ಆರ್ಚಕನಾಗಬೇಕೆಂಬುವುದನ್ನು ದೇವಾಲಯದ ಆಡಳಿತ ಮಂಡಳಿ ನಿರ್ಧರಿಸುತ್ತದೆ. ಆದರೆ ಮಂಡ್ಯ ಜಿಲ್ಲೆಯ ದೇವಸ್ಥಾನವೊಂದರಲ್ಲಿ ತನಗೆ ಯಾರು ಪೂಜೆ ಮಾಡಬೇಕೆಂಬುವುದನ್ನು ಸ್ವತಃ ದೇವರೇ ಪರೋಕ್ಷವಾಗಿ ನಿರ್ಧರಿಸುವ ಮೂಲಕ ಪವಾಡ ಸೃಷ್ಟಿಸಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ಈರೇಗೌಡನದೊಡ್ಡಿಯಲ್ಲಿ ಕಾಲಬೈರವೇಶ್ವರಸ್ವಾಮಿಯ ಬಸಪ್ಪ ಅಲ್ಲಿನ ಮಾರಮ್ಮ ದೇವಸ್ಥಾನಕ್ಕೆ ಅರ್ಚಕನನ್ನು ನೇಮಿಸುವ ಮೂಲಕ ಬಸವವೊಂದು ಪವಾಡ ಮಾಡಿದೆ. ಗ್ರಾಮದ ಮಾರಮ್ಮ ದೇವಸ್ಥಾನಕ್ಕೆ ಯಾರನ್ನು ಅರ್ಚಕನಾಗಿ ನೇಮಿಸುವುದು ಎಂದು ಗ್ರಾಮಸ್ಥರು ಗೊಂದಲದಲ್ಲಿದ್ದರು. ಈ ಕುರಿತ ಗೊಂದಲ ಬಗೆ ಹರಿಸಲು ಕಾಲಭೈರವೇಶ್ವರಸ್ವಾಮಿ ಬಸಪ್ಪನನ್ನು ಗ್ರಾಮಸ್ಥರು ಕರೆತಂದಿದ್ದಾರೆ. ಈರೇಗೌಡನದೊಡ್ಡಿಯ ಕೃಷ್ಣ ಎಂಬವರನ್ನು ಅರ್ಚಕರನಾಗಿ ಬಸಪ್ಪ ಆಯ್ಕೆ ಮಾಡಿದೆ. ಮೊದಲಿಗೆ ಬಸಪ್ಪನ ಆಯ್ಕೆಯನ್ನು ಕೃಷ್ಣ ತಿರಸ್ಕರಿಸಿದ್ದಾರೆ.

ನನಗೆ ಸಾಕಷ್ಟು ಕಷ್ಟಗಳು ಇವೆ, ನಾನು ಅರ್ಚಕ ಆಗಲ್ಲ ಎಂದು ಕೃಷ್ಣ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಬಸಪ್ಪ ತನ್ನ ಕೊಂಬುಗಳಿಂದ ತಿವಿಯುವ ಮೂಲಕ ಕೃಷ್ಣನಿಗೆ ತಕ್ಕ ಪಾಠ ಕಲಿಸಿದೆ. ನಂತರ ಬಸಪ್ಪನ ತೀರ್ಪನ್ನು ಕೃಷ್ಣ ಹಾಗೂ ಗ್ರಾಮಸ್ಥರು ಒಪ್ಪಿಕೊಂಡರು. ಬಳಿಕ ಕೃಷ್ಣನನ್ನು ಗ್ರಾಮ ಕಲ್ಯಾಣಿಗೆ ಮುಳುಗಿಸಿ ಸ್ನಾನ ಮಾಡಿದ ಬಳಿಕ ಕೃಷ್ಣನನ್ನು ಅರ್ಚಕನಾಗಿ ನೇಮಕ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *