ಜೀವಂತ ಗುಂಡುಗಳ ಜೊತೆ ಏರ್​ಪೋರ್ಟ್ ನಲ್ಲಿ ಸಿಕ್ಕಿಬಿದ್ದ ಬಿಜೆಪಿ ಮಾಜಿ ಶಾಸಕ

Public TV
1 Min Read

ಬೆಂಗಳೂರು: ರಾಯಚೂರು ಜಿಲ್ಲೆಯ ಲಿಂಗಸಗೂರಿನ ಬಿಜೆಪಿ ಮಾಜಿ ಶಾಸಕ ಮಾನಪ್ಪ ವಜ್ಜಲ್ 16 ಜೀವಂತ ಗುಂಡುಗಳ ಜೊತೆ ಸಿಕ್ಕಿಬಿದ್ದಿದ್ದಾರೆ.

ಬುಧವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ಎ1 568 ವಿಮಾನದಲ್ಲಿ ಮಾನಪ್ಪ ವಜ್ಜಲ್ ಹೈದಾರಾಬಾದ್‍ಗೆ ಹೊರಟಿದ್ದರು. ಪರಿಶೀಲನೆ ವೇಳೆ ಸಿಐಎಸ್‍ಎಫ್ ಸಿಬ್ಬಂದಿಗೆ .32 ಎಂಎಂ ಕ್ಯಾಲಿಬರ್ ಪಿಸ್ತೂಲ್ ಗೆ ಬಳಸುವ ಬುಲೆಟ್ ಗಳು ಪತ್ತೆಯಾಗಿವೆ.

ಸಿಐಎಸ್‍ಎಫ್ ಸಿಬ್ಬಂದಿ ಮಾನಪ್ಪ ವಜ್ಜಲ್ ಮತ್ತು ಜೀವಂತ ಗುಂಡುಗಳನ್ನ ವಿಮಾನ ನಿಲ್ದಾಣದ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮಾನಪ್ಪ ವಜ್ಜಲ್ ಬಳಿಯಲ್ಲಿರುವ ಗನ್ ಗೆ ಲೈಸನ್ಸ್ ಪಡೆದಿರೋದನ್ನ ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ. ಜೀವಂತ ಗುಂಡುಗಳನ್ನ ಹೈದರಾಬಾದ್ ಗೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *